Published : Jan 14, 2026, 06:53 AM ISTUpdated : Jan 14, 2026, 10:54 PM IST

India Latest News Live: ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ

ಸಾರಾಂಶ

ರುದ್ರಪುರ: ಬೇಸಿಗೆ ವೇಳೆ ಅಂತರ್ಜಲ ಕುಸಿವ ಭೀತಿಯಿಂದ ಉತ್ತರಾಖಂಡದ ಉದಂಸಿಂಗ್‌ ನಗರ ಜಿಲ್ಲೆಯ ತೆರೈ ಪ್ರಾಂತ್ಯದಲ್ಲಿ ಬೇಸಿಗೆ ಭತ್ತ ಕೃಷಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿಗೆ ಮೆಕ್ಕೆಜೋಳ ಕೃಷಿಗೆ ಒತ್ತು ನೀಡಲಾಗಿದೆ. 1 ಕೇಜಿ ಭತ್ತ ಬೆಳೆಯಲು ಸುಮಾರು 5,000 ಲೀಟರ್‌ ನೀರು ಬೇಕಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವದ ವೇಳೆ ಈ ಕೃಷಿ ಅಂತರ್ಜಲಕ್ಕೆ ಕುತ್ತು ತರುತ್ತದೆ. ಜೊತೆಗೆ ಭತ್ತವು ಹೆಚ್ಚು ಕೀಟ, ರೋಗಗಳನ್ನು ಆಕರ್ಷಿಸುವುದರಿಂದ ರೈತರಿಗೆ ಅಧಿಕ ಖರ್ಚು ತಗುಲುತ್ತದೆ. ಹೀಗಾಗಿ ಭತ್ತದ ಬದಲಿಗೆ ಮೆಕ್ಕೆಜೋಳಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಇದರಿಂದಾಗಿ 5000 ಲಕ್ಷ ಲೀಟರ್‌ ಅಂತರ್ಜಲ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

virat kohli

10:54 PM (IST) Jan 14

ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ

ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ, ಈ ಚಿನ್ನದ ಕವರ್‌ನಲ್ಲಿ ವಿರಾಟ್ ಕೊಹ್ಲಿ ಚಿತ್ರ ರಚಿಸಲಾಗಿದೆ. ಕೆಳಗೆ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ.

Read Full Story

08:26 PM (IST) Jan 14

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಆ್ಯಪಲ್ ಆರಂಭಿಸಿದ ಹೊಸ ಕ್ರಿಯೇಟರ್ ಸ್ಟುಡಿಯೋ ಏನು? ಎಲ್ಲಾ ಕಡೆ ಒಂದೇ ಫೀಚರ್ ಲಭ್ಯವಾಗುವಂತೆ ಮಾಡಿರುವ ಆ್ಯಪಲ್ ಕ್ರಿಯೆಟರ್ ಸ್ಟುಡಿಯೋ ಸಬ್‌ಸ್ಕ್ರಿಪ್ಶನ್ ಬೆಲೆ ಎಷ್ಟು?

Read Full Story

07:41 PM (IST) Jan 14

ಒಂದು ಪಾಲಕ್ ಪನ್ನೀರ್‌ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಏನಿದು ಇಬ್ಬರು ವಿದ್ಯಾರ್ಥಿಗಳ ಹೋರಾಟ

ಒಂದು ಪಾಲಕ್ ಪನ್ನೀರ್‌ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಬಹುತೇಕರು ಇಷ್ಟಪಡುವ ಪಾಲಕ್ ಪನ್ನೀರ್ ಈ ಪಾಟಿ ದುಬಾರಿಯಾಗುತ್ತೆ ಅನ್ನೋ ಯಾವ ಲೆಕ್ಕಾಚಾರ ವಿಶ್ವವಿದ್ಯಾಲಯಕ್ಕೆ ಇರಲಿಲ್ಲ.

Read Full Story

07:20 PM (IST) Jan 14

ನಾನು ಸೀತೆಯಲ್ಲ, ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ - ಮಾಡೆಲಿಂಗ್​ಗೆ ಮರಳಿದ ಮಹಾಕುಂಭದ ವೈರಲ್​ ಸಾಧ್ವಿ!

ಪ್ರಯಾಗರಾಜ್ ಮಹಾಕುಂಭದಲ್ಲಿ ಗಮನ ಸೆಳೆದಿದ್ದ ವೈರಲ್ ಸಾಧ್ವಿ ಹರ್ಷ ರಿಚಾರಿಯಾ, ಇದೀಗ ಧರ್ಮದ ಮಾರ್ಗವನ್ನು ತೊರೆಯಲು ನಿರ್ಧರಿಸಿದ್ದಾರೆ. ಆಧ್ಯಾತ್ಮದ ಹಾದಿಯಲ್ಲಿ ಎದುರಾದ ವಿರೋಧ, ಆರ್ಥಿಕ ಸಂಕಷ್ಟ ಮತ್ತು ಸಾಲದಿಂದಾಗಿ, ಅವರು ತಮ್ಮ ಹಳೆಯ ಮಾಡೆಲಿಂಗ್ ಮತ್ತು ನಟನಾ ವೃತ್ತಿಗೆ ಮರಳುವುದಾಗಿ ಘೋಷಿಸಿದ್ದಾರೆ.
Read Full Story

07:18 PM (IST) Jan 14

ಟ್ರಂಪ್‌ ತೆರಿಗೆ ಬಗ್ಗೆ ಇಂದು ಅಮೆರಿಕ ಸುಪ್ರೀಂ ಕೋರ್ಟ್‌ ನಿರ್ಧಾರ, ಸೋತರೆ ದೇಶ ದಿವಾಳಿ ಗ್ಯಾರಂಟಿ ಎಂದ ಅಧ್ಯಕ್ಷ!

ಅಧ್ಯಕ್ಷ ಟ್ರಂಪ್ ಅವರ ಸುಂಕ ವಿಧಿಸುವ ಅಧಿಕಾರದ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ 1977ರ IEEPA ಕಾಯ್ದೆ ಬಳಸಿ ವಿಧಿಸಲಾದ ಈ ಸುಂಕಗಳ ಕಾನೂನುಬದ್ಧತೆಯನ್ನು ನ್ಯಾಯಾಲಯ ನಿರ್ಧರಿಸಲಿದೆ.

Read Full Story

06:36 PM (IST) Jan 14

Rahul Gandhi ಮದ್ವೆ ಆಗಿದ್ಯಾ? ಕ್ರಷ್​ ಯಾರು? ಬ್ಯೂಟಿ ಸೀಕ್ರೆಟ್​ ಏನು? ನಾಚುತ್ತಲೇ ರಿವೀಲ್

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸೌಂದರ್ಯದ ರಹಸ್ಯ, ಮದುವೆ,  ತಮ್ಮ ಕಾಲೇಜು ಕ್ರಷ್​  ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.

Read Full Story

06:33 PM (IST) Jan 14

ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ

ಮಗನಿಗೆ ಹಣದ ಮೌಲ್ಯ ಮತ್ತು ಶಿಕ್ಷಣದ ಮಹತ್ವ ತಿಳಿಸಲು ಚೀನಾದ ತಾಯಿಯೊಬ್ಬಳು ಅವನನ್ನು ಕೆಲಸಕ್ಕೆ ಕಳುಹಿಸುತ್ತಾಳೆ. ಆದರೆ, ಆ ಬಾಲಕ 10 ದಿನಗಳಲ್ಲಿ ಭರ್ಜರಿ ಹಣ ಗಳಿಸಿ, ಶಾಲೆಯನ್ನೇ ಬಿಟ್ಟು ಪೂರ್ಣಾವಧಿ ವ್ಯವಹಾರ ನಡೆಸಲು ಮುಂದಾಗಿದ್ದಾನೆ.

Read Full Story

06:19 PM (IST) Jan 14

ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಅಮೆರಿಕ ದಾಳಿ ಸಾಧ್ಯತೆಯಿಂದ ತೀವ್ರ ಸಂಚಲನ

ತಕ್ಷಣವೇ ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಇರಾನ್ ಪ್ರವಾಸ ಮುಂದೂಡುವಂತೆ ಮನವಿ ಮಾಡಲಾಗಿದೆ. ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ಇರುವ ಕಾರಣ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.

 

Read Full Story

06:16 PM (IST) Jan 14

ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಮತ್ತೆ ಒಂದಾಗುತ್ತಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಯುಜಿ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

Read Full Story

05:49 PM (IST) Jan 14

15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ - ಭಾವುಕರಾದ ಗೆಳೆಯರು

ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ 10 ಸ್ನೇಹಿತರಿಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದ ಸ್ನೇಹಿತರು, 14.7 ಲಕ್ಷದ ಬಿಲ್ ನೋಡಿದಾಗ ದಂಗಾಗಿ ಹೋದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:29 PM (IST) Jan 14

ಕೆ ಎಲ್ ರಾಹುಲ್ ಭರ್ಜರಿ ಶತಕ; ಕಿವೀಸ್‌ಗೆ ಸವಾಲಿನ ಟಾರ್ಗೆಟ್ ಕೊಟ್ಟ ಭಾರತ!

ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಕನ್ನಡಿಗ ಕೆ ಎಲ್ ರಾಹುಲ್ ಅವರ ಅಜೇಯ ಶತಕ (112) ಮತ್ತು ನಾಯಕ ಶುಭ್‌ಮನ್ ಗಿಲ್ ಅವರ ಅರ್ಧಶತಕದ (56) ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 284 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. 

Read Full Story

05:05 PM (IST) Jan 14

ಕೆಜಿಗೆ 3 ಲಕ್ಷ ಗಡಿಯತ್ತ ಬೆಳ್ಳಿ, ಮೂರೇ ದಿನದಲ್ಲಿ 34 ಸಾವಿರ ಏರಿಕೆ; ನಿಜವಾದ ಬೆಳ್ಳಿ ಗುರುತಿಸುವ ನಾಲ್ಕು ಮಾರ್ಗಗಳಿವು!

Silver Price Nears ₹3 Lakh/kg; Gold Hits Record High of ₹1.42 Lakh ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಡಾಲರ್ ದೌರ್ಬಲ್ಯ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಕೈಗಾರಿಕಾ ಬೇಡಿಕೆಯಂತಹ ಕಾರಣಗಳಿಂದ ಈ ಭಾರೀ ಏರಿಕೆ ಕಂಡುಬಂದಿದೆ.

Read Full Story

04:57 PM (IST) Jan 14

ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ

ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಒತ್ತಡಗಳು ಹೆಚ್ಚಾಗಿದೆ.

Read Full Story

04:37 PM (IST) Jan 14

ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸ್ವರ - ಹೂವಿನ ಬಾಣದಂತೆ ಈ ತಂಗಿನೂ ಸ್ವಲ್ಪ ಫೇಮಸ್ ಮಾಡ್ರೋ ಅಣ್ಣಂದಿರಾ..!

ಸೋಶಿಯಲ್ ಮೀಡಿಯಾದಲ್ಲಿ ಮೆಡಿಕೋ ವಿದ್ಯಾರ್ಥಿನಿ ವಿಜಯಲಕ್ಷ್ಮಿ ತನ್ನ ಸುಶ್ರಾವ್ಯ ಕಂಠದಿಂದ ವೈರಲ್ ಆಗುತ್ತಿದ್ದಾರೆ. ಇವರ ಪ್ರತಿಭೆಗೆ ಖ್ಯಾತ ಗಾಯಕಿ ನಂದಿತಾ ಅವರೇ ಫಿದಾ ಆಗಿದ್ದು, ಕೆಟ್ಟ ಹಾಡುಗಳಿಂದ ಫೇಮಸ್ ಆದವರ ಬದಲು ಇಂತಹ ನಿಜವಾದ ಪ್ರತಿಭೆಯನ್ನು ಬೆಳೆಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
Read Full Story

04:09 PM (IST) Jan 14

'ಶುಕ್ರವಾರದ ನಮಾಜ್‌ ವರ್ಷಕ್ಕೆ 52 ಬಾರಿ ಬರುತ್ತೆ, ಹೋಳಿ ಒಮ್ಮೆ ಬರೋದು..' ಎಂದಿದ್ದ ASP ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

Court Orders FIR Against ASP Anuj Chaudhary Over Sambhal Violence Case ಸಂಭಾಲ್ ಹಿಂಸಾಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಎಸ್‌ಪಿ ಅನುಜ್ ಚೌಧರಿ ಹಾಗೂ ಇತರ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್‌ ಆದೇಶ ನೀಡಿದೆ.

Read Full Story

03:38 PM (IST) Jan 14

ಭಾರತದ GenZ ದೊಡ್ಡ ಸಮಸ್ಯೆ ಇದೇ, ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯ ಖಚಿತ!

ಭಾರತದ GenZ ಪ್ರಯಾಣ, ದುಬಾರಿ ಗ್ಯಾಜೆಟ್‌ಗಳಿಗಾಗಿ ಸಾಲ ಮಾಡುತ್ತಿದ್ದರೆ, ಚೀನಾದ GenZ ಭವಿಷ್ಯಕ್ಕಾಗಿ 'ರಿವೇಂಜ್ ಸೇವಿಂಗ್' ಮೊರೆಹೋಗಿದೆ. ಸುಲಭ ಸಾಲದ ಲಭ್ಯತೆಯಿಂದಾಗಿ ಭಾರತದ ಯುವಪೀಳಿಗೆ ಸಾಲದ ಸುಳಿಯಲ್ಲಿ ಸಿಲುಕುವ ಅಪಾಯವಿದ್ದು, ಎಚ್ಚೆತ್ತುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.
Read Full Story

03:34 PM (IST) Jan 14

ವಿಮಾನ ಅಪಘಾತದಲ್ಲಿ ಸಾವಿಗೀಡಾದಂತೆ ಕನಸು - ಕನಸು ಬಿದ್ದ ಕೆಲ ವಾರಗಳಲ್ಲಿ ಅದೇ ರೀತಿ ಸಾವನ್ನಪ್ಪಿದ ಗಾಯಕ

ಕೊಲಂಬಿಯಾದ ಖ್ಯಾತ ಗಾಯಕ ಯೀಸನ್ ಜಿಮೆನೆಜ್, ವಿಮಾನ ಅಪಘಾತದಲ್ಲಿ ಸಾವನ್ನಪ್ಪುವುದಕ್ಕೂ ಕೆಲ ವಾರಗಳ ಮೊದಲು, ತಮಗೆ ವಿಮಾನ ದುರಂತದಲ್ಲಿ ಸಾಯುವಂತೆ ಕನಸು ಬೀಳುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವರ ಈ ಮಾತು ಈಗ ಕನಸುಗಳು ನಿಜವಾಗುತ್ತವೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

03:30 PM (IST) Jan 14

ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ

ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ ಸಿಗಲಿದೆ. ವಿಶೇಷ ಅಂದರೆ ಕೇವಲ 1 ಸಾವಿರ ರೂೂಪಾಯಿಯಿಂದ ಖಾತೆ ಆರಂಭಿಸಲು ಸಾಧ್ಯವಿದೆ. ಏನಿದು ಟಿಡಿ ಖಾತೆ, ಬಡ್ಡಿ ಎಷ್ಟು, ರಿಟರ್ನ್ಸ್ ಹೇಗೆ?

 

Read Full Story

03:02 PM (IST) Jan 14

ರೋಹಿತ್ ಶರ್ಮಾ ದರ್ಬಾರ್ ಬಂದ್; ಏಕದಿನ ರ್‍ಯಾಂಕಿಂಗ್‌ನಲ್ಲಿ ಕಿಂಗ್‌ ಕೊಹ್ಲಿ ಮತ್ತೆ ನಂ.1

ಐಸಿಸಿ ಪ್ರಕಟಿಸಿದ ನೂತನ ಏಕದಿನ ರ್‍ಯಾಂಕಿಂಗ್‌ನಲ್ಲಿ, ವಿರಾಟ್ ಕೊಹ್ಲಿ ನಾಲ್ಕು ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ತಮ್ಮ ಅದ್ಭುತ ಫಾರ್ಮ್‌ನಿಂದಾಗಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿ, 785 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ.
Read Full Story

02:17 PM (IST) Jan 14

ಬಿಜ್ನೋರ್‌ನ ದೇವಾಲಯದಲ್ಲಿ ವಿಚಿತ್ರ ಘಟನೆ - ಕಳೆದ 48 ಗಂಟೆಗಳಿಂದ ಹನುಮ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದೆ. ಈ ಅಚ್ಚರಿಯ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ. 

Read Full Story

01:44 PM (IST) Jan 14

ಅಯ್ಯೋ ದೇವರೇ..! ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡಗೆ ಕನ್ನಡ ಗೊತ್ತಿಲ್ವಾ?

ಬಿಗ್ ಬಾಸ್ ಸ್ಪರ್ಧಿ ಮತ್ತು ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಕಾರ್ಯಕ್ರಮದ ಚಟುವಟಿಕೆಯೊಂದರಲ್ಲಿ ಕನ್ನಡ ಬರೆಯುವಾಗ ಮಾಡಿದ ತಪ್ಪುಗಳಿಂದಾಗಿ ಟ್ರೋಲ್ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ಅವರ ಕನ್ನಡ ಜ್ಞಾನದ ಕೊರತೆಯು ಟೀಕೆಗೆ ಕಾರಣವಾಗಿದೆ.

Read Full Story

12:38 PM (IST) Jan 14

ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ - ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ - ವೀಡಿಯೋ

ಮಗನ ಶಾಲೆಯ ಮುಂದೆ ಸ್ಕೂಟರ್ ನಿಲ್ಲಿಸಿದ ತಂದೆ ಮಗನನ್ನು ಇಳಿಸಿ ಶಾಲೆ ಗೇಟ್‌ನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸ್ಕೂಟರ್‌ನ ಹಿಂದೆ ಕುಳಿತಿದ್ದ ಮಗಳು ಸ್ಕೂಟರ್‌ನ ಡ್ರೈವಿಂಗ್ ಸೀಟ್‌ಗೆ ಬಂದು ಇದಕ್ಕಿದ್ದಂತೆ ಸ್ಕೂಟರ್‌ನ ಅಕ್ಸಿಲರೇಟ್‌ನ್ನು ಒತ್ತಿದ್ದಾಳೆ. ಆಮೇಲೇನಾಯ್ತು ನೋಡಿ..

Read Full Story

12:25 PM (IST) Jan 14

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ

Rahul Gandhi Ram Mandir Visit News: ರಾಹುಲ್ ಗಾಂಧಿ ಶೀಘ್ರದಲ್ಲೇ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಹೇಳಿದ್ದಾರೆ.

 

Read Full Story

12:04 PM (IST) Jan 14

ಇರಾನ್‌ನಲ್ಲಿ ಕೈಮೀರಿದ ಹಿಂಸಾಚಾರ, ಪ್ರತಿಭಟನೆಯಲ್ಲಿ ಭಾಗಿಯಾದ 26 ವರ್ಷದ ವ್ಯಕ್ತಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ!

ಇರಾನ್‌ನಲ್ಲಿ 18 ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿದ್ದ 26 ವರ್ಷದ ಎರ್ಫಾನ್ ಸುಲ್ತಾನಿ ಎಂಬ ಯುವಕನಿಗೆ ಮರಣದಂಡನೆ ವಿಧಿಸಲಾಗಿದೆ. ಸರ್ಕಾರದ ಈ ನಿರ್ಧಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

Read Full Story

11:38 AM (IST) Jan 14

ಇಂಡೋ ಚೀನಾ ಯುದ್ಧದ ವೇಳೆ 600 ಕೇಜಿ ಬಂಗಾರ ದಾನ ಮಾಡಿದ್ದ ದರ್ಬಾಂಗ್‌ನ ಕೊನೆಯ ರಾಣಿ ನಿಧನ

ಬಿಹಾರದ ದರ್ಭಾಂಗ್‌ನ ಕೊನೆಯ ರಾಣಿ, 96 ವರ್ಷದ ಕಾಮಸುಂದರಿ ದೇವಿ ನಿಧನರಾಗಿದ್ದಾರೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ, ಅವರ ರಾಜಮನೆತನವು ದೇಶಕ್ಕೆ 600 ಕೆಜಿ ಬಂಗಾರವನ್ನು ದಾನ ಮಾಡಿತ್ತು. ಅವರ ನಿಧನವು ದರ್ಭಾಂಗ್ ರಾಜಮನೆತನದ ಐತಿಹಾಸಿಕ ಕೊಡುಗೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
Read Full Story

10:52 AM (IST) Jan 14

ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!

ರಾಜ್‌ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ.

 

Read Full Story

09:41 AM (IST) Jan 14

ಬೆಂಗಳೂರು ಫ್ಯಾನ್ಸ್‌ಗೆ ಬಿಗ್ ಶಾಕ್ - ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿಯೇ ಹಿಂದೇಟು?

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಭರದ ಸಿದ್ದತೆಗಳು ಶುರುವಾಗಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿ ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿದೆ.

 

Read Full Story

08:58 AM (IST) Jan 14

ಬೀದಿಗೆ ಬಿದ್ದ ಬಾಕ್ಸರ್‌ ಮೇರಿ ಕೋಮ್‌ ದಾಂಪತ್ಯ ಕಲಹ; ಆಕೆಗೆ ಆ ಇಬ್ಬರ ಜತೆ ಅಕ್ರಮ ಸಂಬಂಧವಿತ್ತು ಎಂದ ಮಾಜಿ ಪತಿ!

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಕುರಿತಂತೆ ಅವರ ಮಾಜಿ ಪತಿ ಕರುಂಗ್‌ ಒನ್ಲರ್‌ ಕೆಲವೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಹೊಸ ಅಪ್‌ಡೇಟ್ಸ್ ಇಲ್ಲಿದೆ ನೋಡಿ

 

Read Full Story

08:23 AM (IST) Jan 14

ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು, ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಇದು ಉಲ್ಲಂಘನೆಯಾಗಿದೆ.  

Read Full Story

More Trending News