ರುದ್ರಪುರ: ಬೇಸಿಗೆ ವೇಳೆ ಅಂತರ್ಜಲ ಕುಸಿವ ಭೀತಿಯಿಂದ ಉತ್ತರಾಖಂಡದ ಉದಂಸಿಂಗ್ ನಗರ ಜಿಲ್ಲೆಯ ತೆರೈ ಪ್ರಾಂತ್ಯದಲ್ಲಿ ಬೇಸಿಗೆ ಭತ್ತ ಕೃಷಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿಗೆ ಮೆಕ್ಕೆಜೋಳ ಕೃಷಿಗೆ ಒತ್ತು ನೀಡಲಾಗಿದೆ. 1 ಕೇಜಿ ಭತ್ತ ಬೆಳೆಯಲು ಸುಮಾರು 5,000 ಲೀಟರ್ ನೀರು ಬೇಕಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವದ ವೇಳೆ ಈ ಕೃಷಿ ಅಂತರ್ಜಲಕ್ಕೆ ಕುತ್ತು ತರುತ್ತದೆ. ಜೊತೆಗೆ ಭತ್ತವು ಹೆಚ್ಚು ಕೀಟ, ರೋಗಗಳನ್ನು ಆಕರ್ಷಿಸುವುದರಿಂದ ರೈತರಿಗೆ ಅಧಿಕ ಖರ್ಚು ತಗುಲುತ್ತದೆ. ಹೀಗಾಗಿ ಭತ್ತದ ಬದಲಿಗೆ ಮೆಕ್ಕೆಜೋಳಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಇದರಿಂದಾಗಿ 5000 ಲಕ್ಷ ಲೀಟರ್ ಅಂತರ್ಜಲ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

10:54 PM (IST) Jan 14
ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ, ಈ ಚಿನ್ನದ ಕವರ್ನಲ್ಲಿ ವಿರಾಟ್ ಕೊಹ್ಲಿ ಚಿತ್ರ ರಚಿಸಲಾಗಿದೆ. ಕೆಳಗೆ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ.
08:26 PM (IST) Jan 14
ಆ್ಯಪಲ್ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಆ್ಯಪಲ್ ಆರಂಭಿಸಿದ ಹೊಸ ಕ್ರಿಯೇಟರ್ ಸ್ಟುಡಿಯೋ ಏನು? ಎಲ್ಲಾ ಕಡೆ ಒಂದೇ ಫೀಚರ್ ಲಭ್ಯವಾಗುವಂತೆ ಮಾಡಿರುವ ಆ್ಯಪಲ್ ಕ್ರಿಯೆಟರ್ ಸ್ಟುಡಿಯೋ ಸಬ್ಸ್ಕ್ರಿಪ್ಶನ್ ಬೆಲೆ ಎಷ್ಟು?
07:41 PM (IST) Jan 14
ಒಂದು ಪಾಲಕ್ ಪನ್ನೀರ್ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಬಹುತೇಕರು ಇಷ್ಟಪಡುವ ಪಾಲಕ್ ಪನ್ನೀರ್ ಈ ಪಾಟಿ ದುಬಾರಿಯಾಗುತ್ತೆ ಅನ್ನೋ ಯಾವ ಲೆಕ್ಕಾಚಾರ ವಿಶ್ವವಿದ್ಯಾಲಯಕ್ಕೆ ಇರಲಿಲ್ಲ.
07:20 PM (IST) Jan 14
07:18 PM (IST) Jan 14
ಅಧ್ಯಕ್ಷ ಟ್ರಂಪ್ ಅವರ ಸುಂಕ ವಿಧಿಸುವ ಅಧಿಕಾರದ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ 1977ರ IEEPA ಕಾಯ್ದೆ ಬಳಸಿ ವಿಧಿಸಲಾದ ಈ ಸುಂಕಗಳ ಕಾನೂನುಬದ್ಧತೆಯನ್ನು ನ್ಯಾಯಾಲಯ ನಿರ್ಧರಿಸಲಿದೆ.
06:36 PM (IST) Jan 14
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸೌಂದರ್ಯದ ರಹಸ್ಯ, ಮದುವೆ, ತಮ್ಮ ಕಾಲೇಜು ಕ್ರಷ್ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.
06:33 PM (IST) Jan 14
ಮಗನಿಗೆ ಹಣದ ಮೌಲ್ಯ ಮತ್ತು ಶಿಕ್ಷಣದ ಮಹತ್ವ ತಿಳಿಸಲು ಚೀನಾದ ತಾಯಿಯೊಬ್ಬಳು ಅವನನ್ನು ಕೆಲಸಕ್ಕೆ ಕಳುಹಿಸುತ್ತಾಳೆ. ಆದರೆ, ಆ ಬಾಲಕ 10 ದಿನಗಳಲ್ಲಿ ಭರ್ಜರಿ ಹಣ ಗಳಿಸಿ, ಶಾಲೆಯನ್ನೇ ಬಿಟ್ಟು ಪೂರ್ಣಾವಧಿ ವ್ಯವಹಾರ ನಡೆಸಲು ಮುಂದಾಗಿದ್ದಾನೆ.
06:19 PM (IST) Jan 14
ತಕ್ಷಣವೇ ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಇರಾನ್ ಪ್ರವಾಸ ಮುಂದೂಡುವಂತೆ ಮನವಿ ಮಾಡಲಾಗಿದೆ. ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ಇರುವ ಕಾರಣ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
06:16 PM (IST) Jan 14
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಮತ್ತೆ ಒಂದಾಗುತ್ತಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಯುಜಿ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
05:49 PM (IST) Jan 14
ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ 10 ಸ್ನೇಹಿತರಿಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಐಫೋನ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದ ಸ್ನೇಹಿತರು, 14.7 ಲಕ್ಷದ ಬಿಲ್ ನೋಡಿದಾಗ ದಂಗಾಗಿ ಹೋದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
05:29 PM (IST) Jan 14
ರಾಜ್ಕೋಟ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಕನ್ನಡಿಗ ಕೆ ಎಲ್ ರಾಹುಲ್ ಅವರ ಅಜೇಯ ಶತಕ (112) ಮತ್ತು ನಾಯಕ ಶುಭ್ಮನ್ ಗಿಲ್ ಅವರ ಅರ್ಧಶತಕದ (56) ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 284 ರನ್ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
05:05 PM (IST) Jan 14
Silver Price Nears ₹3 Lakh/kg; Gold Hits Record High of ₹1.42 Lakh ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಡಾಲರ್ ದೌರ್ಬಲ್ಯ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಕೈಗಾರಿಕಾ ಬೇಡಿಕೆಯಂತಹ ಕಾರಣಗಳಿಂದ ಈ ಭಾರೀ ಏರಿಕೆ ಕಂಡುಬಂದಿದೆ.
04:57 PM (IST) Jan 14
ಕಾರಿನೊಳಗಿನ ಸೀನ್ನಿಂದ ಹೆಚ್ಚಿದ ರಾಜಕೀಯ ಒತ್ತಡ, ನಟಿ ಬಿಟ್ರಿಝ್ ತೌಫೆನ್ಬ್ಯಾಕ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಒತ್ತಡಗಳು ಹೆಚ್ಚಾಗಿದೆ.
04:37 PM (IST) Jan 14
04:09 PM (IST) Jan 14
Court Orders FIR Against ASP Anuj Chaudhary Over Sambhal Violence Case ಸಂಭಾಲ್ ಹಿಂಸಾಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಎಸ್ಪಿ ಅನುಜ್ ಚೌಧರಿ ಹಾಗೂ ಇತರ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ.
03:38 PM (IST) Jan 14
03:34 PM (IST) Jan 14
03:30 PM (IST) Jan 14
ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ ಸಿಗಲಿದೆ. ವಿಶೇಷ ಅಂದರೆ ಕೇವಲ 1 ಸಾವಿರ ರೂೂಪಾಯಿಯಿಂದ ಖಾತೆ ಆರಂಭಿಸಲು ಸಾಧ್ಯವಿದೆ. ಏನಿದು ಟಿಡಿ ಖಾತೆ, ಬಡ್ಡಿ ಎಷ್ಟು, ರಿಟರ್ನ್ಸ್ ಹೇಗೆ?
03:02 PM (IST) Jan 14
02:17 PM (IST) Jan 14
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದೆ. ಈ ಅಚ್ಚರಿಯ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.
01:44 PM (IST) Jan 14
ಬಿಗ್ ಬಾಸ್ ಸ್ಪರ್ಧಿ ಮತ್ತು ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಕಾರ್ಯಕ್ರಮದ ಚಟುವಟಿಕೆಯೊಂದರಲ್ಲಿ ಕನ್ನಡ ಬರೆಯುವಾಗ ಮಾಡಿದ ತಪ್ಪುಗಳಿಂದಾಗಿ ಟ್ರೋಲ್ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ಅವರ ಕನ್ನಡ ಜ್ಞಾನದ ಕೊರತೆಯು ಟೀಕೆಗೆ ಕಾರಣವಾಗಿದೆ.
12:38 PM (IST) Jan 14
ಮಗನ ಶಾಲೆಯ ಮುಂದೆ ಸ್ಕೂಟರ್ ನಿಲ್ಲಿಸಿದ ತಂದೆ ಮಗನನ್ನು ಇಳಿಸಿ ಶಾಲೆ ಗೇಟ್ನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸ್ಕೂಟರ್ನ ಹಿಂದೆ ಕುಳಿತಿದ್ದ ಮಗಳು ಸ್ಕೂಟರ್ನ ಡ್ರೈವಿಂಗ್ ಸೀಟ್ಗೆ ಬಂದು ಇದಕ್ಕಿದ್ದಂತೆ ಸ್ಕೂಟರ್ನ ಅಕ್ಸಿಲರೇಟ್ನ್ನು ಒತ್ತಿದ್ದಾಳೆ. ಆಮೇಲೇನಾಯ್ತು ನೋಡಿ..
12:25 PM (IST) Jan 14
Rahul Gandhi Ram Mandir Visit News: ರಾಹುಲ್ ಗಾಂಧಿ ಶೀಘ್ರದಲ್ಲೇ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಹೇಳಿದ್ದಾರೆ.
12:04 PM (IST) Jan 14
ಇರಾನ್ನಲ್ಲಿ 18 ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿದ್ದ 26 ವರ್ಷದ ಎರ್ಫಾನ್ ಸುಲ್ತಾನಿ ಎಂಬ ಯುವಕನಿಗೆ ಮರಣದಂಡನೆ ವಿಧಿಸಲಾಗಿದೆ. ಸರ್ಕಾರದ ಈ ನಿರ್ಧಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
11:38 AM (IST) Jan 14
10:52 AM (IST) Jan 14
ರಾಜ್ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ.
09:41 AM (IST) Jan 14
ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರದ ಸಿದ್ದತೆಗಳು ಶುರುವಾಗಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್ಸಿಬಿ ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿದೆ.
08:58 AM (IST) Jan 14
ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಕುರಿತಂತೆ ಅವರ ಮಾಜಿ ಪತಿ ಕರುಂಗ್ ಒನ್ಲರ್ ಕೆಲವೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಹೊಸ ಅಪ್ಡೇಟ್ಸ್ ಇಲ್ಲಿದೆ ನೋಡಿ
08:23 AM (IST) Jan 14
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಡಬ್ಲ್ಯುಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಇದು ಉಲ್ಲಂಘನೆಯಾಗಿದೆ.