ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ, ಎಸ್ಆರ್ಐ ವಿಶೇಷ ವೀಕ್ಷಕರಾಗಿದ್ದ ಸುಬ್ರತಾ ಗುಪ್ತಾ ಅವರು ನೇಮಕಗೊಂಡಿದ್ದಾರೆ.
1990ರ ಬ್ಯಾಚಿನ ಅಧಿಕಾರಿಯಾಗಿರುವ ಗುಪ್ತಾ ಅವರು ಚುನಾವಣೆಗೆ ಮುಂಚೆ ನಡೆದಿದ್ದ ಮತಪಟ್ಟಿ ಪರಿಷ್ಕರಣೆಯ ವಿಶೇಷ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮತ್ತೊಂದೆಡೆ 2017ರ ಬ್ಯಾಚಿನ ಐಎಎಸ್ ಅಧಿಕಾರಿ ಶಂತನು ಬಾಲಾ ಅವರನ್ನು ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಆದೇಶಿಸಿದೆ.
10:28 PM (IST) May 10
ವರ್ಕ್ ಫ್ರಮ್ ಹೋಮ್, ವಿದೇಶದಲ್ಲಿ ಮದುವೆ ಬೇಡ, ವಿದೇಶ ಯಾತ್ರೆ ಕಡಿತ, ಮನೆಯಿಂದ ಕೆಲಸ, ಇವಿ ವಾಹನ ಬಳಕೆ, ಅನಗತ್ಯ ಚಿನ್ನ ಖರೀದಿ ಬೇಡ ಸೇರಿದಂತೆ ಈ ಒಂದು ವರ್ಷ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.
09:43 PM (IST) May 10
ಬಾಲಿವುಡ್ನ ಯುವ ನಟಿಯರು 'ಫೇಕ್ ಪಿಆರ್ ಗೇಮ್' ಮೂಲಕ ತಮ್ಮನ್ನು ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ನಟಿ ಅಮೀಶಾ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಒಂದು ದೊಡ್ಡ ಹಿಟ್ ಸಿನಿಮಾ ನೀಡದೆಯೇ ಹೇಗೆ ನಂಬರ್ 1 ಪಟ್ಟಕ್ಕೇರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
08:54 PM (IST) May 10
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?
08:49 PM (IST) May 10
ನಂದಮೂರಿ ಕುಟುಂಬದಿಂದ 15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾವೊಂದು ಬರಲಿದೆ. ಯಂಗ್ ಟೈಗರ್ ಜೂ.ಎನ್ಟಿಆರ್ ನಟಿಸಲಿರುವ ಈ ಚಿತ್ರದ ಬಗ್ಗೆ ಮೇ 20ರಂದು ದೊಡ್ಡ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ.
08:43 PM (IST) May 10
ನಟ, ತಮಿಳುನಾಡು ನೂತನ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳು ತಮ್ಮ ಅಮ್ಮನಿಗೆ ಕೊಟ್ಟ ಉಡುಗೊರೆ ಏನು?
08:16 PM (IST) May 10
ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
07:38 PM (IST) May 10
ಮೈನೆ ಪ್ಯಾರ್ ಕಿಯಾ' ಮೂಲಕ ಒಂದೇ ರಾತ್ರಿಯಲ್ಲಿ ಸ್ಟಾರ್ ಆದ ನಟಿ ಭಾಗ್ಯಶ್ರೀ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಸಲ್ಮಾನ್ ಖಾನ್ಗಿಂತ ಹೆಚ್ಚು ಸಂಭಾವನೆ ಪಡೆದಿದ್ದರ ಬಗ್ಗೆ ಅವರು ನೀಡಿರುವ ಹೇಳಿಕೆ.
07:06 PM (IST) May 10
06:55 PM (IST) May 10
ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.
06:37 PM (IST) May 10
ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಉತ್ತರ..?
06:20 PM (IST) May 10
ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ತಂಡ ಜೇಕಬ್ ಬೆತೆಲ್ ಬದಲಾವಣೆ ಮಾಡುತ್ತಾ? ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಮುಂಬೈ ತಂಡದಲ್ಲಿ ಇಂಜರು ಸಮಸ್ಯೆಯಿಂದ ಆತಂಕ ಎದುರಾಗಿದೆ.
05:55 PM (IST) May 10
ಮೋಹನ್ಲಾಲ್-ಜೀತು ಜೋಸೆಫ್ ಕಾಂಬಿನೇಷನ್ನ ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾದ ಸಸ್ಪೆನ್ಸ್ ತುಂಬಿದ ಟ್ರೇಲರ್ ರಿಲೀಸ್ ಆಗಿದೆ. ಮೋಹನ್ಲಾಲ್ ಹುಟ್ಟುಹಬ್ಬದ ದಿನವಾದ ಮೇ 21ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.
05:36 PM (IST) May 10
ರಾಮ್ ಚರಣ್ ಅವರ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ರಿಲೀಸ್ಗೂ ಮುನ್ನವೇ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ಗಳು ಭರ್ಜರಿಯಾಗಿ ಸೇಲ್ ಆಗುತ್ತಿವೆ. ಇನ್ನೂ ಟ್ರೇಲರ್ ರಿಲೀಸ್ ಆಗಿಲ್ಲ.
05:22 PM (IST) May 10
ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲೆನೋವು ಶುರುವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಉಲ್ಲಂಘನೆ ಆರೋಪ ಕೇಳಿಬಂದಿದೆ. ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆ ಸ್ಥಾನವನ್ನು ಸಿಪಿಐ ಪ್ರಶ್ನಿಸಿದೆ.
05:16 PM (IST) May 10
ತನ್ನ ಸೋದರಿ ದಿಯಾ ಅವರ ಮಗ ಓಮಿಗೆ 'ದೊಡ್ಡಮ್ಮ' ಎಂದು ಕರೆಸಿಕೊಳ್ಳಲು ತನಗೆ ಇಷ್ಟವಿಲ್ಲ ಎಂದು ನಟಿ ಅಹಾನಾ ಕೃಷ್ಣ ಹೇಳಿದ್ದಾರೆ. ಈ ಹಿಂದೆ ಅವರ ಸೋದರಿ ಇಶಾನಿ ಕೂಡ 'ಚಿಕ್ಕಮ್ಮ' ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದರು. ಈಗ ಅಹಾನಾ ಸರದಿ.
05:06 PM (IST) May 10
ಯಾವಾಗಲೂ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಈ ನಟಿ, ಈಗ ವಿಜಯ್ ಮತ್ತು ತ್ರಿಷಾ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ವಿಜಯ್ ಮತ್ತು ತ್ರಿಷಾ ಇಬ್ಬರೂ ನನಗೆ ಚೆನ್ನಾಗಿ ಗೊತ್ತು. ಅವರಿಬ್ಬರೂ ಮದುವೆಯಾಗಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಅವರು ಮದುವೆಯಾದರೆ, ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ" ಎಂದಿದ್ದಾರೆ.
04:52 PM (IST) May 10
ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ, ನಟ ಸಂಜಯ್ ದತ್ ತಮ್ಮ ತಾಯಿ, ದಿವಂಗತ ನಟಿ ನರ್ಗಿಸ್ ದತ್ ಅವರನ್ನು ನೆನಪಿಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
04:50 PM (IST) May 10
ನಟ ಜೊಸೆಫ್ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
04:32 PM (IST) May 10
ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅವರು ಕೇರಳದ ಆಲುವಾದಲ್ಲಿ ರಹಸ್ಯವಾಗಿ ಕುದುರೆ ಸವಾರಿ ಕಲಿಯುತ್ತಿದ್ದರು ಎಂಬ ವರದಿಗಳು ಹೊರಬಿದ್ದಿವೆ.
04:23 PM (IST) May 10
ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ (X) ಖಾತೆಯಲ್ಲಿ ವಿಜಯ್ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಉದ್ದೇಶಿಸಿ ಸುದೀರ್ಘ ಪತ್ರ ಬರೆದಿದ್ದಾರೆ. "ನನ್ನ ಪ್ರೀತಿಯ ರೌಡಿ ಹುಡುಗ-ಹುಡುಗಿಯರೇ, ನನ್ನ ಅಣ್ಣ-ತಂಗಿಯರೇ ಹಾಗೂ ತಂದೆ-ತಾಯಿಯ ಸಮಾನರಾದ ಹಿರಿಯರೇ... ಮುಂದೆ ಓದಿ..
04:14 PM (IST) May 10
ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಟಿವಿಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೇರಿದೆ. ಅಮ್ಮಂದಿರ ದಿನದಂದೇ ನಡೆದ ಈ ಕಾರ್ಯಕ್ರಮ, ತಾಯಿ ಶೋಭಾ ಚಂದ್ರಶೇಖರ್ಗೆ ಸಿಕ್ಕ ಅತಿದೊಡ್ಡ ಉಡುಗೊರೆಯಾಗಿದೆ.
03:05 PM (IST) May 10
ಎನ್ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಡ್ಡಾದಿಡ್ಡಿ ಹಾಗೂ ಅಜಾಗರೂಕತೆ ಚಾಲನೆಯಲ್ಲಿದ್ದ ಕಾರೊಂದು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
02:42 PM (IST) May 10
ದಕ್ಷಿಣ ಭಾರತದ ಹಿರಿಯ ನಟಿ ದೇಶದ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
02:38 PM (IST) May 10
ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್ಕೆ ವಿಶೇಷ ಮನವಿಯೊಂದನ್ನು ಮಾಡಿದೆ.
01:51 PM (IST) May 10
ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು ವಿವರಿಸಲಾಗಿದೆ.
01:27 PM (IST) May 10
12:01 PM (IST) May 10
ವಿಷ್ಣುಪ್ರಿಯಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಅವರೊಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಡಿಸ್ಕಸ್ ಥ್ರೋ ಆಟಗಾರ್ತಿ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಜಿಲ್ಲಾ ಮತ್ತು ದಕ್ಷಿಣ ವಲಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, ತಾಯಿಯ ನಿರಾಕರಣೆಯಿಂದಾಗಿ ಕ್ರೀಡಾ ಲೋಕದಿಂದ ದೂರ ಉಳಿಯಬೇಕಾಯಿತು.
11:36 AM (IST) May 10
2026ರ ತಮಿಳುನಾಡು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಜರಾಗಿದ್ದರು.
11:31 AM (IST) May 10
11:27 AM (IST) May 10
ಸಾಮಾನ್ಯವಾಗಿ ನಟಿಯರಿಗೆ ಯಾರ ಮೇಲೆ ಕ್ರಶ್ ಇದೆ ಎಂದು ಕೇಳಿದರೆ ಅವರು ನಾಚಿಕೊಳ್ಳುತ್ತಾರೆ ಅಥವಾ ಮೌನಕ್ಕೆ ಶರಣಾಗುತ್ತಾರೆ. ಆದರೆ ಸಾಯಿ ಪಲ್ಲವಿ ಹಾಗಲ್ಲ, ಅವರು ನೇರ ನುಡಿಯ ವ್ಯಕ್ತಿತ್ವದವರು. ಸಾಯಿ ಪಲ್ಲವಿ ಅವರಿಗೆ ತನ್ನ ಕಾಲೇಜು ದಿನಗಳಿಂದಲೂ ಒಬ್ಬ ನಟನ ಮೇಲೆ ಅತೀವವಾದ ಪ್ರೀತಿ ಇತ್ತಂತೆ. ಯಾರವರು ನೋಡಿ!
10:18 AM (IST) May 10
10:06 AM (IST) May 10
ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ! ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಗೆದ್ದಿರುವುದನ್ನು ಪ್ರಶ್ನಿಸಿ ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್ ಚೆನ್ನೈ ಹೈಕೋರ್ಟ್ನಲ್ಲಿ ಧಾವೆ ಹೂಡಿದ್ದಾರೆ.