ಹೈದರಾಬಾದ್: ‘ಬಿಜೆಪಿಯು ಮುಂದೊಂದು ದಿನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರಿಗೂ ನೀಡಲಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಹಿಂದುತ್ವವಾದಿ ವಿ.ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆ ಬೆನ್ನಲ್ಲೇ ಒವೈಸಿ ಈ ರೀತಿ ಹೇಳಿದ್ದಾರೆ.
ತೆಲಂಗಾಣದ ಮೆಹಬೂಬನಗರದಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅವರು, ‘ಬ್ರಿಟಿಷರಿಗೆ 6 ಕ್ಷಮದಾನ ಅರ್ಜಿಗಳನ್ನು ಬರೆದವರಿಗೆ ಆರ್ಎಸ್ಎಸ್ ಭಾರತ ರತ್ನ ನೀಡಬೇಕೆಂದು ಹೇಳುತ್ತದೆ. ಗಾಂಧಿಯವರ ಹತ್ಯೆಯಲ್ಲಿ ಸಾವರ್ಕರ್ ಪಿತೂರಿಗಾರ ಎಂದು ನ್ಯಾ। ಕಪೂರ್ ಅವರ ವರದಿ ಹೇಳಿದೆ. ಗಾಂಧಿ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗೆ ನೀವು ಭಾರತ ರತ್ನ ನೀಡಬೇಕೆಂದು ಕೇಳುತ್ತಿದ್ದೀರಿ. ಅಭಿನಂದನೆಗಳು. ಬಿಜೆಪಿ ಮುಂದೊಂದು ದಿನ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರಿಗೂ ಭಾರತ ರತ್ನ ನೀಡಬೇಕೆಂದು ಹೇಳುವ ಸಮಯ ಬರುತ್ತದೆ’ ಎಂದು ಕಿಡಿಕಾರಿದ್ದಾರೆ.
11:11 PM (IST) Feb 10
US Used Pakistan Like Toilet Paper: Pak Defence Minister Khawaja Asif ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಮೆರಿಕವು ಪಾಕಿಸ್ತಾನವನ್ನು ತನ್ನ ಯುದ್ಧಗಳಿಗಾಗಿ 'ಟಾಯ್ಲೆಟ್ ಪೇಪರ್'ನಂತೆ ಬಳಸಿಕೊಂಡು ನಂತರ ಕೈಬಿಟ್ಟಿದೆ ಎಂದು ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
11:06 PM (IST) Feb 10
ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್, ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಯಾರು ಈ ಮಾಜಿ ಗೆಳತಿ
10:31 PM (IST) Feb 10
ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ, ಹಳೆಯ ಆ್ಯಪ್ ಕೆಲಸ ಮಾಡುವುದಿಲ್ಲ, ಹೀಗಾಗಿ ಪ್ರಯಾಣಿಕರೇ ನೀವು ಆ್ಯಪ್ ಬದಲಿಸಿಕೊಳ್ಳಿ.
10:28 PM (IST) Feb 10
10:03 PM (IST) Feb 10
ದೀಪಕ್ ಕುಮಾರ್ ಜಿಮ್ನಲ್ಲಿದ್ರು 150 ಮಂದಿ,ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ, ಸೋಶಿಯಲ್ ಮೀಡಿಯಾ, ಕಾಂಗ್ರೆಸ್, ಸಿಪಿಎಂ ನಾಯಕರಿಗೆ ಹೀರೋ ಆದ ದೀಪಕ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ
09:27 PM (IST) Feb 10
09:03 PM (IST) Feb 10
ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆ ಪ್ರಧಾನಿ ಮೋದಿ ಆಹ್ವಾನಿಸಿದ ಸಚಿನ್ ಕುಟುಂಬ, ಪ್ರಧಾನಿ ಮೋದಿ ಮಾತ್ರವಲ್ಲ, ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರನ್ನು ತೆಂಡೂಲ್ಕರ್ ಕುಟುಂಬ ಮದುವೆಗೆ ಆಹ್ವಾನಿಸಿದೆ.
08:04 PM (IST) Feb 10
ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ಗರ್ಲ್ಫ್ರೆಂಡ್ ಜೊತೆಗಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಪತ್ನಿ, ಗಂಡನ ಪ್ರಿಯತಮೆಗೆ ಥಳಿಸಿದ್ದು, ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.
07:58 PM (IST) Feb 10
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬರಿ ರಚನೆಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ರಾಮದ್ರೋಹಿ'ಗಳಿಗೆ ದೇಶದ ಕಾನೂನಿಗೆ ಬದ್ಧರಾಗಿರಲು ಎಚ್ಚರಿಸಿದ್ದಾರೆ.
07:40 PM (IST) Feb 10
Viral Video: Couple Caught on Railway Platform Under Bedsheet ರೈಲ್ವೇ ಸ್ಟೇಷನ್ ಫ್ಲಾಟ್ಫಾರ್ಮ್ನಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಬೆಡ್ಶೀಟ್ ಹೊದ್ದು ಮಲಗಿದ್ದ ಜೋಡಿಯ ಮೇಲಿನ ಹೊದಿಕೆಯನ್ನು ವ್ಯಕ್ತಿಯೊಬ್ಬರು ಎಳೆದಿದ್ದಾರೆ.
07:18 PM (IST) Feb 10
ರಸ್ತೆ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಮರಿಗೆ ಸ್ಮಶಾನದ ದಾರಿಗೆ ಅರ್ಧ ಜಮೀನು ದಾನ ನೀಡಿದ ಸಿಖ್ ಕುಟುಂಬ, ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಕಳೆದ 70 ವರ್ಷಗಳಿಂದ ತೀವ್ರ ನರಕಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ಸೌಹಾರ್ಧತೆ ಮೂಲಕ ನೆಮ್ಮದಿ ನೀಡಿದ ಸಿಖ್ ಕುಟುಂಬ.
07:03 PM (IST) Feb 10
ತಿರುವನಂತಪುರ: ಇತ್ತೀಚಿಗಿನ ಯುವ ತಲೆಮಾರು ವಿವಾಹ ಪೂರ್ವ ಲೈಂ*ಗಿಕ ಚಟುವಟಿಕೆಗಳನ್ನು ನಡೆಸುವ ಪ್ರಕರಣಗಳ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ ಅದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಳ್ಳುವ ವಿಕೃತಿಗಳು ಅನಾಹುತಗಳಿಗೆ ಆಸ್ಪದ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ
06:57 PM (IST) Feb 10
Govt to Sell 5% Stake in BHEL via OFS | Target ₹4,500 Crore ನರೇಂದ್ರ ಮೋದಿ ಸರ್ಕಾರವು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಶೇ. 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ಯೋಜಿಸುತ್ತಿದೆ.
06:37 PM (IST) Feb 10
ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರದರ್ಶಿಸಿ ಸರ್ಕಾರವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ, ಪುಸ್ತಕ ಇನ್ನೂ ಪ್ರಕಟವಾಗಿಲ್ಲಎಂದು ಪ್ರಕಾಶಕರಾದ ಪೆಂಗ್ವಿನ್ ಪಬ್ಲಿಕೇಷನ್ ಸ್ಪಷ್ಟನೆ ನೀಡಿದೆ.
06:32 PM (IST) Feb 10
Supriya Sule Daughter Revati Sule Marriage Fixed ಎನ್ಸಿಪಿ (ಎಸ್ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ, ನಾಗ್ಪುರ ಮೂಲದ ಉದ್ಯಮಿ ಸಾರಂಗ್ ಲಖಾನಿ ಅವರನ್ನು ವಿವಾಹವಾಗಲಿದ್ದಾರೆ.
06:23 PM (IST) Feb 10
ದುಡ್ಡಿಲ್ಲ, ಸಹಾಯಕ್ಕೆ ಗೆಳೆಯರೂ ಇಲ್ಲ, ಕಣ್ಣೀರಿನೊಂದಿಗೆ ಜೈಲಿನಲ್ಲಿ ದಿನದೂಡುತ್ತಿರುವ ಹಾಸ್ಯನಟ, ಎಲ್ಲರನ್ನು ನಗಿಸುವ ರಾಜ್ಪಾಲ್ ಇದೀಗ ಕಣ್ಣೀರಿನಲ್ಲೇ ದಿನ ದೂಡುವಂತಾಗಿದೆ. ಸಾಲದ ಸುಳಿಗೆ ಸಿಲುಕಿದ ನಟ ತಿಹಾರ್ ಜೈಲಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿ ಇರ್ಲಿಲ್ಲ ಎಂದಿದ್ದಾರೆ.
06:22 PM (IST) Feb 10
05:51 PM (IST) Feb 10
ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋಸ್ ಬಟ್ಲರ್, ಭಾರತದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು ತಾನು ನೋಡಿದ ಅತ್ಯುತ್ತಮ ಯುವ ಆಟಗಾರ ಎಂದು ಬಣ್ಣಿಸಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ 175 ರನ್ ಆಟಕ್ಕೆ ಬಟ್ಲರ್ ಬೆರಗಾಗಿದ್ದಾರೆ.
05:28 PM (IST) Feb 10
ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ, ಇದೀಗ ಮದುವೆಯಾದ ಮಹಿಳೆಯರ ನಮ್ಮ ಗಂಡನ ಮನಸ್ಸು ಹೀಗೆ ಆಗಲಿ ಎಂದು ಪ್ರಾರ್ಥಿಸಿದರೆ, ಮದುವೆಯಾಗದವರು ಇಂತಹ ಗಂಡನೇ ಸಿಗಲಿ ಎಂದು ಆಶಿಸುತ್ತಿದ್ದಾರೆ.
05:14 PM (IST) Feb 10
ರಶ್ಮಿಕಾ ತಮ್ಮ ಹಿಂದಿನ 'ನೋ ಚಾಯ್ಸ್' ಸಂಬಂಧದ ಬಗ್ಗೆ ಮಾತನಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದೆ. ಆ ಭಾವನಾತ್ಮಕ ನೋವಿನಿಂದ ಹೊರಬರಲು ಮತ್ತು ಆನ್ಲೈನ್ ಟ್ರೋಲಿಂಗ್ ಎದುರಿಸುವಾಗ ವಿಜಯ್ ತಮಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.
04:49 PM (IST) Feb 10
ಮುಂಬೈನ ಮೆರಿನ್ ಡ್ರೈವ್ನಲ್ಲಿ ಯುವತಿಯೊಬ್ಬಳು ತನ್ನನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾಳೆ. ಆತನ ಫೋನ್ ಪರಿಶೀಲಿಸಿ, ಫೋಟೋಗಳನ್ನು ಡಿಲೀಟ್ ಮಾಡಿಸಿದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
04:44 PM (IST) Feb 10
ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್, ವಾಯ್ಸ್, ವಿಡಿಯೋ ಕಾಲ್ ಫೀಚರ್ ಆರಂಭ, ಇಷ್ಟು ದಿನ ಈ ಫೀಚರ್ ಮೊಬೈಲ್ ಆ್ಯಪ್ ಬಳಕೆ ಮಾಡುವವರಿಗೆ ಮಾತ್ರ ಲಭ್ಯವಿತ್ತು. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೂ ಲಭ್ಯವಿದೆ.
04:18 PM (IST) Feb 10
Social Media Star Nirmala Navale Loses Panchayat Election by 300 Votes ಸೋಶಿಯಲ್ ಮೀಡಿಯಾದಲ್ಲಿ ಅಪಾರ ಖ್ಯಾತಿ ಗಳಿಸಿದ್ದ ಮಾಜಿ ಪಂಚಾಯತ್ ಅಧ್ಯಕ್ಷೆ ನಿರ್ಮಲಾ ನವಲೆ, ಇತ್ತೀಚಿನ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
04:02 PM (IST) Feb 10
ಲಕ್ಕುಂಡಿಗೂ ಮೊದಲು ರೈತನಿಗೆ ಸಿಕ್ಕಿತ್ತು ನಿಧಿ, ಲಾಟರಿ ಗೆದ್ದ ಹಣದಲ್ಲಿ ಖರೀದಿಸಿದ ಭೂಮಿಯಲ್ಲಿತ್ತು ಸಂಪತ್ತು, ಕೇವಲ 27 ಸೆಂಟ್ ಜಾಗ ಖರೀದಿಸಿ ತರಕಾರಿ ಬೆಳೆಯಲು ಹೋದ ರೈತನಿಗೆ ಅಚ್ಚರಿ ಮೇಲೆ ಅಚ್ಚರಿ ಕಾದಿತ್ತು.
03:00 PM (IST) Feb 10
ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆಯೋಜನೆಗೆ ಇದ್ದಂತಹ ಅಡ್ಡಿ ಆತಂಕಗಳು ಕೊನೆಗೂ ನಿವಾರಣೆಯಾಗಿದ್ದು, ಭಾರತ ಎದುರು ಮ್ಯಾಚ್ ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ಸರ್ಕಾರ ಘೋಷಿಸಿದೆ. ಇದರ ಜತೆಗೆ ಐಸಿಸಿ, ಪಾಕ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ.
02:59 PM (IST) Feb 10
ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'PRನಿಂದ ಮುಚ್ಚಿಟ್ಟ ದ್ರೋಹ' ಎಂದು ಟೀಕಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಒಪ್ಪಿಕೊಳ್ಳುವ ಮೂಲಕ ಭಾರತ ತನ್ನ ಸಾರ್ವಭೌಮತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
02:56 PM (IST) Feb 10
ಖ್ಯಾತ ಬಾಲಿವುಡ್ ನಟಿ ಸಂದರ್ಶನವೊಂದರಲ್ಲಿ, ತಮ್ಮ ಪತಿಯ ಫ್ಯಾಷನ್ ಪ್ರಜ್ಞೆಯ ಬಗ್ಗೆ ಮಾತನಾಡಿದ್ದು, ಅವರು ಧರಿಸುವ ಬಟ್ಟೆಯ ಬಣ್ಣಕ್ಕೆ ಹೊಂದುವಂತಹ ಒಳಉಡುಪನ್ನೇ ಧರಿಸುತ್ತಾರೆ ಎಂಬ ತಮಾಷೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಕೇಳಿ ಎಲ್ಲರರೂ
02:23 PM (IST) Feb 10
ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಇದ್ರೆ ಆಗಲ್ಲ ಸಪ್ತಪದಿ ತುಳಿದರೆ ಮಾತ್ರ ಹಿಂದೂ ಮದುವೆ ಮಾನ್ಯ; ಇದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೆ ಮಾತ್ರ ಕಾನೂನು ಬದ್ಧ ಎಂದಿದೆ.
02:13 PM (IST) Feb 10
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಮೇಲೆ ದೈಹಿಕ ಹಲ್ಲೆಗೆ ಕಾಂಗ್ರೆಸ್ ಸಂಸದರು ಸಂಚು ರೂಪಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕಿರೆನ್ ರಿಜಿಜು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ಸದನದಲ್ಲಿ ನಡೆದ ಗದ್ದಲವನ್ನು ತೋರಿಸುತ್ತಿದ್ದು, ಬಿಜೆಪಿ ಆರೋಪಕ್ಕೆ ಪುಷ್ಠಿ ನೀಡಿದೆ
01:59 PM (IST) Feb 10
ಟಿ20 ವಿಶ್ವಕಪ್ ವೇಳೆ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ದೆಹಲಿಯ ತಮ್ಮ ನಿವಾಸದಲ್ಲಿ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ, ಗಂಭೀರ್ ಜೊತೆ ಅವರ ಪತ್ನಿ ನತಾಶಾ ಕೂಡ ತಂಡಕ್ಕೆ ಆತ್ಮೀಯ ಸ್ವಾಗತ ಕೋರಿದರು.
01:42 PM (IST) Feb 10
ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ನಾಯಕನ ದುರಂತ ಸಾವಿನ ಬೆನ್ನಲ್ಲೇ ಇದೀಗ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಕುಟುಂಬಸ್ಥರು ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
12:44 PM (IST) Feb 10
impact of divorce on children: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಪೋಷಕರ ವಿಚ್ಛೇದನದ ನಂತರ, ತಾಯಿಯೊಂದಿಗೆ ಹೋಗಲು ನಿರಾಕರಿಸಿ ಅಪ್ಪನಿಗಾಗಿ ಅಳುತ್ತಿರುವ ಮಗುವಿನ ವೀಡಿಯೋವೊಂದು ವೈರಲ್ ಆಗಿದ್ದು, ಇದು ಮಕ್ಕಳ ಮಾನಸಿಕ ನೋವನ್ನು ಎತ್ತಿ ತೋರಿಸುತ್ತಿದೆ.
12:32 PM (IST) Feb 10
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್ಎ ಎದುರು ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಇದೀಗ ಫೆಬ್ರವರಿ 12ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
10:45 AM (IST) Feb 10
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಪತ್ನಿಯೊಬ್ಬಳು ತನಗೆ ಬೇಕಾದ ವಸ್ತುವನ್ನು ಕೊಡಿಸಲಿಲ್ಲವೆಂದು ಗಂಡನೊಂದಿಗೆ ಜಗಳವಾಡುತ್ತಾ ಅಳುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಪ್ರೀತಿ, ಮದುವೆ ಮತ್ತು ಹಣದ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
10:22 AM (IST) Feb 10
09:39 AM (IST) Feb 10
ಬಾಲಿವುಡ್ ನಟ ರಾಜ್ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. 2010ರ 'ಅತಾ ಪತಾ ಲಾ ಪತಾ' ಚಿತ್ರಕ್ಕೆ ಸಂಬಂಧಿಸಿದ ₹2.5 ಕೋಟಿ ವಿವಾದದಲ್ಲಿ ಕೋರ್ಟ್ನಿಂದ ರಿಲೀಫ್ ಸಿಗದ ಕಾರಣ, ಅವರು ಭಾವುಕರಾಗಿ ಜೈಲಿಗೆ ಹೋಗುವ ಮುನ್ನ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
09:18 AM (IST) Feb 10
08:53 AM (IST) Feb 10
08:13 AM (IST) Feb 10
07:47 AM (IST) Feb 10
SIR ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ಯಾವುದೇ ಅಡ್ಡಿ ಉಂಟಾಗಲು ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಾನೂನು ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ.