LIVE NOW
Published : Feb 10, 2026, 07:07 AM ISTUpdated : Feb 10, 2026, 09:39 AM IST

India Latest News Live: 'ಏನ್ಮಾಡ್ಲಿ ಸರ್, ನನ್ನತ್ರ ದುಡ್ಡಿಲ್ಲ' - ತಿಹಾರ್ ಜೈಲಿಗೆ ಹೋಗುವ ಮುನ್ನ ಭಾವುಕರಾದ ನಟ ರಾಜ್‌ಪಾಲ್ ಯಾದವ್!

ಸಾರಾಂಶ

ಹೈದರಾಬಾದ್‌: ‘ಬಿಜೆಪಿಯು ಮುಂದೊಂದು ದಿನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಅವರಿಗೂ ನೀಡಲಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ. ಹಿಂದುತ್ವವಾದಿ ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಹೇಳಿಕೆ ಬೆನ್ನಲ್ಲೇ ಒವೈಸಿ ಈ ರೀತಿ ಹೇಳಿದ್ದಾರೆ.

ತೆಲಂಗಾಣದ ಮೆಹಬೂಬನಗರದಲ್ಲಿ ನಡೆದ ಚುನಾವಣಾ ರ್‍ಯಾಲಿ ವೇಳೆ ಮಾತನಾಡಿದ ಅವರು, ‘ಬ್ರಿಟಿಷರಿಗೆ 6 ಕ್ಷಮದಾನ ಅರ್ಜಿಗಳನ್ನು ಬರೆದವರಿಗೆ ಆರ್‌ಎಸ್‌ಎಸ್‌ ಭಾರತ ರತ್ನ ನೀಡಬೇಕೆಂದು ಹೇಳುತ್ತದೆ. ಗಾಂಧಿಯವರ ಹತ್ಯೆಯಲ್ಲಿ ಸಾವರ್ಕರ್‌ ಪಿತೂರಿಗಾರ ಎಂದು ನ್ಯಾ। ಕಪೂರ್‌ ಅವರ ವರದಿ ಹೇಳಿದೆ. ಗಾಂಧಿ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗೆ ನೀವು ಭಾರತ ರತ್ನ ನೀಡಬೇಕೆಂದು ಕೇಳುತ್ತಿದ್ದೀರಿ. ಅಭಿನಂದನೆಗಳು. ಬಿಜೆಪಿ ಮುಂದೊಂದು ದಿನ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್‌ ಗೋಡ್ಸೆ ಅವರಿಗೂ ಭಾರತ ರತ್ನ ನೀಡಬೇಕೆಂದು ಹೇಳುವ ಸಮಯ ಬರುತ್ತದೆ’ ಎಂದು ಕಿಡಿಕಾರಿದ್ದಾರೆ.

09:39 AM (IST) Feb 10

'ಏನ್ಮಾಡ್ಲಿ ಸರ್, ನನ್ನತ್ರ ದುಡ್ಡಿಲ್ಲ' - ತಿಹಾರ್ ಜೈಲಿಗೆ ಹೋಗುವ ಮುನ್ನ ಭಾವುಕರಾದ ನಟ ರಾಜ್‌ಪಾಲ್ ಯಾದವ್!

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. 2010ರ 'ಅತಾ ಪತಾ ಲಾ ಪತಾ' ಚಿತ್ರಕ್ಕೆ ಸಂಬಂಧಿಸಿದ ₹2.5 ಕೋಟಿ ವಿವಾದದಲ್ಲಿ ಕೋರ್ಟ್‌ನಿಂದ ರಿಲೀಫ್ ಸಿಗದ ಕಾರಣ, ಅವರು ಭಾವುಕರಾಗಿ ಜೈಲಿಗೆ ಹೋಗುವ ಮುನ್ನ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Read Full Story

09:18 AM (IST) Feb 10

OTT Crime Thrillers - ಓಟಿಟಿಯಲ್ಲಿ ನೋಡಲೇಬೇಕಾದ ಬೆಸ್ಟ್ ಇಂಡಿಯನ್ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್‌ಗಳು

ಥ್ರಿಲ್ಲರ್ ಸಿನಿಮಾಗಳೆಂದರೆ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವಂತಹ ಕಥೆಗಳು. ಇಂತಹ ಸೀರಿಸ್‌ಗಳಲ್ಲಿ ಸಸ್ಪೆನ್ಸ್, ಟ್ವಿಸ್ಟ್‌ಗಳು, ನಿಗೂಢತೆ ಎಲ್ಲವೂ ಇರುತ್ತದೆ. ಭಾರತದಲ್ಲಿ ಬಿಡುಗಡೆಯಾದ ಕೆಲವು ಅತ್ಯುತ್ತಮ ಕ್ರೈಂ ವೆಬ್ ಸೀರಿಸ್‌ಗಳ ಬಗ್ಗೆ ಈ ಗ್ಯಾಲರಿಯಲ್ಲಿ ನೋಡೋಣ.
Read Full Story

08:53 AM (IST) Feb 10

Box Office Disaster - ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?

ವಿವಾದಗಳಿಂದಲೇ ಸದ್ದು ಮಾಡಿದ್ದ ನಟ ಚಂದ್ರ ಹಾಸನ್ ಅಭಿನಯದ 'ಬರಾಬರ್ ಪ್ರೇಮಿಸ್ತಾ' ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದೆ. ಆದರೆ ಸಿನಿಮಾದ ಕಲೆಕ್ಷನ್ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ.
Read Full Story

08:13 AM (IST) Feb 10

Minimum Balance - ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದಕ್ಕೆ 8,000 ಕೋಟಿ ರೂ. ದಂಡ ವಸೂಲಿ ಮಾಡಿದ ಬ್ಯಾಂಕುಗಳು!

ಕಳೆದ ಮೂರು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 8,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ದಂಡ ಸಂಗ್ರಹಿಸಿದ್ದು, ಎಸ್‌ಎಂಎಸ್ ಸೇವೆಗಳಿಗಾಗಿಯೂ ಬ್ಯಾಂಕುಗಳು ಸಾವಿರಾರು ಕೋಟಿ ಶುಲ್ಕ ವಿಧಿಸಿವೆ.
Read Full Story

07:47 AM (IST) Feb 10

SIR - ಮಮತಾ ಬ್ಯಾನರ್ಜಿ ಕಾನೂನು ಹೋರಾಟಕ್ಕೆ ಹಿನ್ನಡೆ; ಸುಪ್ರೀಂಕೋರ್ಟ್‌ ಖಡಕ್ ಎಚ್ಚರಿಕೆ!

SIR ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್‌ಐಆರ್‌) ಯಾವುದೇ ಅಡ್ಡಿ ಉಂಟಾಗಲು ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಾನೂನು ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ.

Read Full Story

07:37 AM (IST) Feb 10

ಬಹಿಷ್ಕಾರದಿಂದ ಯೂಟರ್ನ್‌ - ಇಲ್ಲಿ ದುಡ್ಡೇ ದೊಡ್ಡಪ್ಪ! ICC ಮುಂದೆ ಅಂಗಲಾಚಿದ ಪಾಕ್

ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯ ಆಡಲು ನಿರಾಕರಿಸಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಈಗ ಹಣಕಾಸಿನ ಕಾರಣಗಳಿಗಾಗಿ ತಮ್ಮ ನಿಲುವನ್ನು ಬದಲಿಸಿವೆ. ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನವು ಐಸಿಸಿ ಮುಂದೆ ಬೇಡಿಕೆಯಿಟ್ಟಿದ್ದು, ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆಯಿದೆ.
Read Full Story

More Trending News