ಪೆಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಕಠಿಣ ಕ್ರಮಕ್ಕೆ ಸಜ್ಜಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ನಾಪತ್ತೆಯಾಗಿದ್ದು, ಐದು ಸಾವಿರ ಯೋಧರು ರಾಜೀನಾಮೆ ನೀಡಿದ್ದಾರೆ. ಕಮಾಂಡರ್‌ಗಳು ಸೇನೆಯ ಆತ್ಮಸ್ಥೈರ್ಯ ಕುಗ್ಗಿರುವುದನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಉಗ್ರರು ಪಾಕಿಸ್ತಾನದಿಂದ ೨೨ ಗಂಟೆ ನಡೆದು ಭಾರತಕ್ಕೆ ಬಂದಿದ್ದರು.

ಇಸ್ಲಾಮಾಬಾದ್(ಏ.28) ಪೆಹಲ್ಗಾಂ ದಾಳಿ ನಡೆಸಲು ಉಗ್ರರು ಪಾಕಿಸ್ತಾನದಿಂದ 22 ಗಂಟೆ ನಡೆದುಕೊಂಡು ಭಾರತಕ್ಕೆ ಬಂದಿದ್ದರು. ಪೆಹಲ್ಗಾಂ ದಾಳಿಯಲ್ಲಿ ಪಾಕಿಸ್ತಾನ ಸೇನೆ ಕೈವಾಡ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಇತ್ತೀಚೆಗೆಷ್ಟೇ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತ ಪ್ರತೀಕಾರಕ್ಕೆ ಸಜ್ಜಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಭಾರತದ ಈ ಭಾರಿ ಹಿಂದೆಂದೂ ನೋಡದ, ಮುಂದೆ ಮೇಲೆಳಲು ಸಾಧ್ಯವಾಗದ ರೀತಿಯಲ್ಲಿ ಪ್ರತೀಕಾರಕ್ಕೆ ಸಜ್ಜಾಗುತ್ತಿದೆ. ಭಾರತದ ತಯಾರಿ ನೋಡಿದ ಪಾಕಿಸ್ತಾನ ಸೇನೆಯ ಬರೋಬ್ಬರಿ 5,000 ಯೋಧರು ಹಾಗೂ ಸೇನಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗಬೇಕಾಗಿದೆ. 

ಮುಖ್ಯಸ್ಥನೇ ಪರಾರಿ, ಯೋಧರು ರಾಜೀನಾಮೆ
ಪೆಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತೀಕಾರಕ್ಕೆ ಸದ್ದಾಗಿದೆ.ಈಗಾಲೇ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಂದೊಂದೆ ದಿಕ್ಕಿನಿಂದ ಪಾಕಿಸ್ತಾನವನ್ನು ಏಕಾಂಗಿ ಮಾಡಲಾಗುತ್ತಿದೆ. ಜಲ ಒಪ್ಪಂದ ರದ್ದು, ವಾಘಾ ಗಡಿ ಬಂದ್, ಪಾಕಿಸ್ತಾನ ಪ್ರಜೆಗಳಿಗೆ ದೇಶ ಬಿಡಲು ಸೂಚನೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒತ್ತಡ ಹೇರುವ ತಂತ್ರವನ್ನು ಭಾರತ ಪ್ರಯೋಗಿಸಿದೆ. ಇದೀಗ ಪಾಕಿಸ್ತಾನ ನ್ಯೂಕ್ಲಿಯರ್ ಅಸ್ತ್ರ ಝಳಪಿಸುತ್ತಾ ಭಾರತವನ್ನು ಬೆದರಿಸುವ ತಂತ್ರಕ್ಕೆ ಮುಂದಾಗಿದೆ. ಈ ಬೆಳವಣಿಗೆ ನಡುವೆಯೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತನ್ನ ಕುಟುಂಬವನ್ನು ಲಂಡನ್‌ಗೆ ಸ್ಥಳಾಂತರಿಸಿದೆ. ಇದೀಗ ಸ್ವತಃ ಆಸೀಮ್ ಮುನೀರ್ ನಾಪತ್ತೆ ಅನ್ನೋ ಮಾತುಗಳು ಪಾಕಿಸ್ತಾನದಲ್ಲೇ ಕೇಳಿಬರುತ್ತಿದೆ. ಯುದ್ಧದ ಸನ್ನಿವೇಶದಲ್ಲಿ ಮುಂದೆ ನಿಲ್ಲಬೇಕಾದ ಸೇನಾ ಮುಖ್ಯಸ್ಥನೇ ತನ್ನ ಕುಟುಂಬ, ತನ್ನ ಸುರಕ್ಷತೆಗೆ ಆದ್ಯತೆ ನೀಡಿರುವುದು ಇದೀಗ ಪಾಕಿಸ್ತಾನ ಸೇನೆಯ ಯೋಧರು, ಇತರ ಅಧಿಕಾರಿಗಳ ಬೆಚ್ಚಿ ಬೀಳಿಸಿದೆ. ಹೀಗಾಗಿ ಭಾರತದ ಪ್ರತೀಕಾರ ಭಯದಲ್ಲಿ ಕಳೆದೆರಡು ದಿನದಲ್ಲಿ ಸುಮಾರು 5,000 ಯೋಧರು, ಸೇನಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ಭಾರತದ ಡಿಜಿಟಲ್ ಸ್ಟ್ರೈಕ್, ಶೋಯೆಬ್ ಅಕ್ತರ್ ಸೇರಿ ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್ ಬ್ಯಾನ್

ಕಮಾಂಡರ್ ಪತ್ರ ಹೆಚ್ಚಿಸಿದ ಪಾಕಿಸ್ತಾನಿಗಳ ಆತಂಕ
ಪಾಕಿಸ್ತಾನ ಮಿಲಿಟರಿಯ 11 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಮರ್ ಬುಖಾರಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ಸೇನೆಯ ಆತ್ಮಸ್ಥೈರ್ಯ ಕುಗ್ಗಿದೆ. ಪ್ರತಿ ದಿನ ರಾಜೀನಾಮೆ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜೀನಾಮೆ ಮುಂದುವರಿದಿದೆ, ಭಾರತದ ಸೇನೆಗೆ ತಕ್ಕ ಉತ್ತರ ನೀಡಲು ಪಾಕಿಸ್ತಾನ ಸೇನೆ ವಿಫಲವಾಗಲಿದೆ ಎಂದು ಎಚ್ಚರಿಸಿದ್ದಾರೆ. ಪಾಕಿಸ್ತಾನದ ಅಂಕಿ ಅಂಶಗಳ ಪ್ರಕಾರ ಪಾಕ್ ಮಿಲಿಟರ್ 12ನೇ ಕಾರ್ಪ್ಸ್ ಬೆಟಾಲಿಯನ್‌ನ 200 ಸೇನಾಧಿಕಾರಿಗಳು, 600 ಯೋಧರು ರಾಜೀನಾಮೆ ನೀಡಿದ್ದಾರೆ. ನಾರ್ದನ್ ಕಮಾಂಡ್ ಏರಿಯಾ ಬೆಟಾಲಿಯನ್ 100 ಸೇನಾಧಿಕಾರಿಗಳು ಹಾಗೂ 500 ಯೋಧರು ರಾಜೀನಾಮೆ ನೀಡಿದ್ದಾರೆ. ಭಾರತದ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಮಂಗಲ್ ಕಾರ್ಪ್ಸ್ ಬೆಟಾಲಿಯನ್‌ನ 75 ಸೇನಾಧಿಕಾರಿಗಳು ಹಾಗೂ 500 ಯೋಧರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜೀನಾಮೆ ಬೆನ್ನಲ್ಲೇ ಪಾಕಿಸ್ತಾನ ಕಸರತ್ತು

ಯೋಧರು ಒಬ್ಬರ ಹಿಂದೊಬ್ಬರು ರಾಜೀನಾಮೆ ನೀಡುತ್ತಿದ್ದಂತೆ ಇದೀಗ ಪಾಕಿಸ್ತಾನ ಸೇನೆಯಲ್ಲಿ ತರಬೇತು ಪಡೆಯುತ್ತಿದ್ದ ಸೇನಾಧಿಕಾರಿಗಳ ಗ್ರಾಜ್ಯುಯೇಶನ್ ಸೆರಮನಿ ಪೂರ್ಣಗೊಳಿಸಿದೆ. ಅಬೋಟೋಬಾದ್‌ನ ಕಾಕುಲ್‌ನಲ್ಲಿ ನಡೆದ ಸೇನಾ ಯೋಧರ ಗ್ರಾಜ್ಯುಯೇಶನ್ ಡೇ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ಬಳಿಕ ಅಸೀಮ್ ಮನೀರ್ ಎಲ್ಲೂ ಕಾಣಿಸಿಕೊಂಡಿಲ್ಲ.

Scroll to load tweet…

ಪಾಕಿಸ್ತಾನ ಸೇನಾ ಮುಖ್ಯಸ್ಥರ ನಡೆ ಪಾಕಿಸ್ತಾನ ಯೋಧರನ್ನು ಚಿಂತೆಗೀಡು ಮಾಡಿದೆ. ಪಾಕ್ ಸೇನಾ ಮುಖ್ಯಸ್ಥರೇ ಜೀವ ಭಯದಿಂದ ಓಡುತ್ತಿರುವುದಾಗಿ ವರದಿಯಾಗಿದೆ. ಇದು ಪಾಕಿಸ್ತಾನ ಸೇನಾ ಯೋಧರ ಕಂಗೆಡೆಸಿದೆ. ಹೀಗಾಗಿ ಒಬ್ಬರ ಹಿಂದೊಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಇತ್ತ ಭಾರತ ಯಾವ ರೀತಿ ದಾಳಿ ಮಾಡಲಿದೆ ಅನ್ನೋ ಯಾವುದೇ ಸುಳಿವು ಪಾಕಿಸ್ತಾನಕ್ಕೆ ಸಿಕ್ಕಿಲ್ಲ. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮೂಲಕ ಭಾರತದ ಈ ಹಿಂದೆ ಕೆಲ ಎಚ್ಚರಿಕೆ ನೀಡಿತ್ತು. ಹೀಗಾಗಿ ಈ ಬಾರಿ ಇವೆಲ್ಲಕ್ಕಿಂತ ಹೆಚ್ಚು ಕಠಿಣ ರೀತಿಯ ದಾಳಿಗೆ ಭಾರತ ಸಜ್ಜಾಗುತ್ತಿದೆ ಅನ್ನೋ ಆತಂಕ ಪಾಕಿಸ್ತಾನ ಸೇನೆಯಲ್ಲಿ ಮಡುಗಟ್ಟಿದೆ.

ಉಗ್ರರಿಂದ ತಪ್ಪಿಸಿಕೊಂಡು ಮರವೇರಿ ಪೆಹಲ್ಗಾಮ್ ದಾಳಿ ಸಂಪೂರ್ಣ ದೃಶ್ಯ ಸೆರೆ ಹಿಡಿದ ಫೋಟೋಗ್ರಾಫರ್