ಸುಡಾನ್ ಎಲ್‌ಪಿಜಿ ಟ್ಯಾಂಕರ್ ಸ್ಫೋಟ ದುರಂತ| 18 ಭಾರತೀಯರು ಸೇರಿ 23 ಜನರ ದುರ್ಮರಣ| ಸುಡಾನ್‌ನ ಸೆರಾಮಿಕ್ ಕಾರ್ಖಾನೆ ಬಳಿ ಗ್ಯಾಸ್ ಟ್ಯಂಕರ್ ಸ್ಫೋಟ| ಘಟನೆ ಕುರಿತು ಮಾಹಿತಿ ಕೇಳಿದ ಕೇಂದ್ರ ಸರ್ಕಾರ| ಸುಡಾನ್ ಜತೆ ಕೇಂದ್ರ ಸರ್ಕಾರ ಚರ್ಚೆ| ಸಂತ್ರಸ್ತರ ನೆರವಿಗೆ ಕೇಂದ್ರದಿಂದ ಸಹಾಯವಾಣಿ| +249-921917471 ಕರೆ ಮಾಡಲು ಮನವಿ|

ಖರ್ತೋಮ್(ಡಿ.04): ಸುಡಾನ್ ಫ್ಯಾಕ್ಟರಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 18 ಭಾರತೀಯರು ಸೇರಿದಂತೆ ಒಟ್ಟು 23 ಜನರು ದುರ್ಮರಣಕ್ಕೀಡಾಗಿದ್ದಾರೆ.

ಫ್ಯಾಕ್ಟರಿ ಬಳಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಇಡೀ ಕಾರ್ಖಾನೆ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಭಸ್ಮವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾರ್ಖಾನೆಯಲ್ಲಿ ಸುಮಾರು 50 ಭಾರತೀಯರು ಕೆಲಸ ಮಾಡುತ್ತಿದ್ದು, ಈ ಪೈಕಿ 18 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರನ್’ವೇಯಲ್ಲೇ ವಿಮಾನ ಪತನ; ಪ್ರಯಾಣಿಕರು ಪವಾಡಸದೃಶ ಪಾರು

Scroll to load tweet…

ಇನ್ನು ಸುಡಾನ್ ಸ್ಫೋಟದ ಮಾಹಿತಿ ಪಡೆದ ಕೇಂದ್ರ ಸರ್ಕಾರ, ಸುಡಾನ್‌ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದೆ.

ಸಂತ್ರಸ್ತ ಕುಟುಂಬಸ್ಥರ ನೆರವಿಗಾಗಿ ವಿದೇಶಾಂಗ ಇಲಾಖೆ ಈಗಾಗಲೇ ಸಹಾಯವಾಣಿ ಕೇಂದ್ರ ತೆರೆದಿದ್ದು, +249-921917471 ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಮನವಿ ಮಾಡಿದೆ.

Scroll to load tweet…

ಈ ಕುರಿತು ಟ್ವಿಟ್ ಮಾಡಿರುವ ವಿದೇಶಾಂಗ ಸಚಿವ ಜೈ ಶಂಕರ್, ಭಾರತೀಯರ ರಕ್ಷಣೆಗಾಗಿ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.