ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಬೈಯಿಸಿಕೊಂಡ ಟರ್ಕಿ ಅಧ್ಯಕ್ಷ| ಕಾಶ್ಮೀರ ವಿಚಾರ ಟರ್ಕಿಗೆ ಹತ್ತಿರವಾದುದು ಎಂದ ರಿಸೆಪ್ ತಯ್ಯಿಪ್ ಎರ್ಡೊಗನ್| ಪಾಕಿಸ್ತಾನ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ ಎರ್ಡೊಗಾನ್| ಪಾಕ್ ಸಂಸತ್ತಿನಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಎರ್ಡೊಗಾನ್|  ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕದಂತೆ ಎರ್ಡೊಗಾನ್’ಗೆ ಎಚ್ಚರಿಕೆ| ಕಾಶ್ಮೀರ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗ ಎಂದ ರವೀಶ್ ಕುಮಾರ್|

ನವದೆಹಲಿ(ಫೆ.15): ಕಾಶ್ಮೀರ ವಿಚಾರ ಪಾಕಿಸ್ತಾನ ಹಾಗೂ ಟರ್ಕಿಗೆ ಹತ್ತಿರವಾದುದು ಎಂದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗಾನ್ ಅವರನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ ಎರ್ಡೊಗಾನ್, ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾಶ್ಮೀರ ಪ್ರಸ್ತಾಪ ಮಾಡಿದ ಎರ್ಡೊಗಾನ್, ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ವಿದೇಶಿ ಪ್ರಾಬಲ್ಯದ ವಿರುದ್ಧ ಟರ್ಕಿ ಜನತೆ ನಡೆಸಿದ ಹೋರಾಟಕ್ಕೆ ಕಾಶ್ಮೀರ ಹೋರಾಟವನ್ನು ಹೋಲಿಕೆ ಮಾಡಿದರು.

ಕಾಶ್ಮೀರದ ಭಯೋತ್ಪಾದನೆಯನ್ನು ಸ್ವಾತಂತ್ರ್ಯ ಹೋರಾಟ ಎಂದು ಕರೆದಿರುವ ಎರ್ಡೊಗಾನ್, ಈ ವಿಚಾರ ಪಾಕಿಸ್ತಾನ ಹಾಗೂ ಟರ್ಕಿಗೆ ಹತ್ತಿರವಾದುದು ಎಂದು ಹೇಳಿದರು.

Scroll to load tweet…

ಇನ್ನು ಎರ್ಡೊಗನ್ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತ, ನಮ್ಮ ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ಸೂಕ್ತ ತಿರುಗೇಟು ನೀಡಿದೆ. ಎರ್ಡೊಗಾನ್ ಹೇಳಿಕೆ ಅನಗತ್ಯ ಎಂದು ಭಾರತ ಜರೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಕಾಶ್ಮೀರ ಭಾರತದ ಅವಿಭಾಜ್ಯ ಹಾಗೂ ನಾಶಪಡಿಸಲಾಗದ ಭಾಗವಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಬೆಂಬಲ: ಈ ದೇಶದ ಪ್ರವಾಸ ರದ್ದುಗೊಳಿಸಿದ ಮೋದಿ!

ಭಾರತದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯ ಅರವಿರದ ಎರ್ಡೊಗಾನ್, ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ ಹಾಕುವ ವಿಫಳ ಯತ್ನ ಮಾಡಿದ್ದಾರೆ ಎಂದು ರವೀಶ್ ಕಿಡಿಕಾರಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"