Asianet Suvarna News Asianet Suvarna News

Britainನಲ್ಲಿ ಹಿಂದೂ ದೇವಾಲಯ ಧ್ವಂಸ; ಕೇಸರಿ ಧ್ವಜವನ್ನು ತೆಗೆದ ಪಾಕ್‌ ಮೂಲದವರು..!

ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಆಗಸ್ಟ್‌ 28, 2022 ರಂದು ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ ಲೀಸೆಸ್ಟರ್‌ನ ಕೆಲ ಪ್ರದೇಶಗಳಲ್ಲಿ ಹಿಂಸಾಚಾರ ಆರಂಭವಾಯಿತು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. 

hindu temple vandalised saffron flag taken down in riot hit leicester in unied kingdom ash
Author
First Published Sep 19, 2022, 5:24 PM IST

ಯುನೈಟೆಡ್ ಕಿಂಗ್‌ಡಮ್‌ನ ಪೂರ್ವ ಲೀಸೆಸ್ಟರ್‌ನಲ್ಲಿ ಹಿಂದೂ ದೇವಾಲಯವನ್ನು (Hindu Temple) ಧ್ವಂಸಗೊಳಿಸಿದ (Vandalised) ಘಟನೆ ನಡೆದಿದೆ. ಹಾಗೂ, ಆ ದೇಗುಲದ ಹೊರಗಿದ್ದ ಕೇಸರಿ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಕೆಡವಿದ್ದಾರೆ. ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಲೀಸೆಸ್ಟರ್‌ಶೈರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ (Viral Video) ಕಪ್ಪು ಬಟ್ಟೆಯನ್ನು ಧರಿಸಿದ ವ್ಯಕ್ತಿಯೊಬ್ಬರು ಕಟ್ಟಡದ ಮೇಲೆ ಏರಿ ಕೇಸರಿ ಧ್ವಜವನ್ನು ಜನರ ಗುಂಪಿನ ಕೂಗು ಮತ್ತು ಹರ್ಷೋದ್ಗಾರದ ನಡುವೆ ಕೆಳಗಿಳಿಸುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲೀಸೆಸ್ಟರ್‌ ಪೊಲೀಸರು, "ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಕಟ್ಟಡದ (Religious Building) ಹೊರಗೆ ವ್ಯಕ್ತಿಯೊಬ್ಬರು ಧ್ವಜವನ್ನು (Flag) ಕೆಳಗಿಳಿಸುತ್ತಿರುವುದನ್ನು ತೋರಿಸುವ ವಿಡಿಯೋ ಹರಿದಾಡುತ್ತಿರುವ ಬಗ್ಗೆ ನಮಗೆ ತಿಳಿದಿದೆ. ಅಧಿಕಾರಿಗಳು ಹತ್ತಿರದ ಸಾರ್ವಜನಿಕ ಅಸ್ವಸ್ಥತೆಯನ್ನು ನಿಭಾಯಿಸುತ್ತಿರುವಾಗ ಇದು ಸಂಭವಿಸಿದೆ ಎಂದು ತೋರುತ್ತದೆ. ನಾವು ಹಿಂಸಾಚಾರ ಅಥವಾ ಅವ್ಯವಸ್ಥೆಯನ್ನು ಸಹಿಸುವುದಿಲ್ಲ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಮಾಹಿತಿ ನೀಡಿದೆ. 

ಕಳೆದ ತಿಂಗಳು ಅಂದರೆ ಆಗಸ್ಟ್‌ 28 ರಂದು ನಡೆದ ಏಷ್ಯಾ ಕಪ್ ಪಂದ್ಯದಲ್ಲಿ (Asia Cup Match) ಭಾರತವು ಪಾಕಿಸ್ತಾನವನ್ನು ಸೋಲಿಸಿದ ನಂತರ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವಿನ ಕೋಮು ಉದ್ವಿಗ್ನತೆಯ (Communal Tensions) ನಡುವೆ ವಿಧ್ವಂಸಕ ಘಟನೆ ನಡೆದಿದೆ. ಕಳೆದ ತಿಂಗಳ ಕೊನೆಯಲ್ಲಿ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ನಂತರ ಅಭಿಮಾನಿಗಳ ನಡುವಿನ ಘರ್ಷಣೆಗಳು ಶನಿವಾರ ಮತ್ತು ಪೂರ್ವ ಲೀಸೆಸ್ಟರ್‌ನಲ್ಲಿ ಭಾನುವಾರದ ಮುಂಜಾನೆ "ಗಂಭೀರ ಅಸ್ವಸ್ಥತೆ" ಯಾಗಿ ಹೊರಹೊಮ್ಮಿದ ನಂತರ ಪೊಲೀಸರು ಶಾಂತವಾಗಿರಲು ಕರೆ ನೀಡಿದರು. ಇನ್ನು, ಈ ಘಟನೆಗಳ ಸಂಬಂಧ ಇಲ್ಲಿಯವರೆಗೆ, ಪೊಲೀಸರು 15 ಜನರನ್ನು ಬಂಧಿಸಿದ್ದಾರೆ - ಈ ಪೈಕಿ ಒಬ್ಬನನ್ನು ಹಿಂಸಾತ್ಮಕ ಅಸ್ವಸ್ಥತೆಗೆ ಬಂಧಿಸಿದ್ದರೆ ಮತ್ತೊಬ್ಬನನ್ನು ಬ್ಲೇಡ್ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ. 

ಇದನ್ನು ಓದಿ: Canada: ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು..!

ಘಟನೆಯ ವಿವರ ಹೀಗಿದೆ..
ಲೀಸೆಸ್ಟರ್‌ನಲ್ಲಿ ಮುಸ್ಲಿಂ ಮತಾಂಧರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಮತ್ತು ಕೇಸರಿ ಧ್ವಜವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಅಲ್ಲಿನ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆಗಸ್ಟ್ 28 ರಂದು ಏಷ್ಯಾ ಕಪ್ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂದೂಗಳ ಮೇಲೆ ಉದ್ದೇಶಿತ ದಾಳಿಗಳು ನಡೆದ ನಂತರ, ಶಸ್ತ್ರಸಜ್ಜಿತ ಇಸ್ಲಾಮಿಗಳು ಹಿಂದೂಗಳು ಮತ್ತು ಸುತ್ತಮುತ್ತಲಿನ ಅವರ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಪಾಕ್‌ ಮೂಲದವರು ಈ ಕೃತ್ಯ ನಡೆಸಿದ್ದಾರೆ ಹಾಗೂ ಐಸಿಸ್‌ ಕೈವಾಡ ಇರಬಹುದು ಎಂದೂ ವರದಿಗಳು ಹೇಳ್ತಿವೆ.

ಅಲ್ಲದೆ, ವರದಿಗಳ ಪ್ರಕಾರ, ಉದ್ರಿಕ್ತ ಮುಸ್ಲಿಂ ಗುಂಪು, ಮಕ್ಕಳು ಸೇರಿದಂತೆ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿತು. ಕಾರುಗಳು ಮತ್ತು ಇತರ ಹಿಂದೂ ಒಡೆತನದ ಆಸ್ತಿಗಳನ್ನು ಉರುಳಿಸಲಾಗಿದೆ ಮತ್ತು ಧ್ವಂಸಗೊಳಿಸಲಾಗಿದೆ ಎಂದೂ ಕೆಲ ವರದಿಗಳು ಹೇಳಿವೆ. ಇಸ್ಲಾಂ ಹಿಂಸಾಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂಗಳು ನಡೆಸಿದ ಪ್ರತಿಭಟನೆಯ ನಂತರ ಬೀದಿಗಳಲ್ಲಿ ಗಲಭೆ ಮುಂದುವರಿದಂತೆ ಪೊಲೀಸ್ ಅಧಿಕಾರಿಗಳು ಲೀಸೆಸ್ಟರ್‌ನ ಬೀದಿಗಳಲ್ಲಿ ಸುತ್ತುವರಿದಿದ್ದು, ಶಾಂತಿಯನ್ನು ಪ್ರೋತ್ಸಾಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಜರಾತ್‌ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?

ಲೀಸೆಸ್ಟರ್‌ಶೈರ್ ಪೊಲೀಸರ ಅಧಿಕೃತ ಹೇಳಿಕೆಯ ಪ್ರಕಾರ, ಶನಿವಾರ ಸಂಜೆ ಪುರುಷರ ಗುಂಪು 'ಯೋಜಿತವಲ್ಲದ ಪ್ರತಿಭಟನೆ' ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. "ಪೂರ್ವ ಲೀಸೆಸ್ಟರ್‌ನ ಭಾಗಗಳು ನಿನ್ನೆ ಸಂಜೆ (ಶನಿವಾರ ಸೆಪ್ಟೆಂಬರ್ 17) ಇಂದು ಬೆಳಗ್ಗೆ (ಭಾನುವಾರ) ವರೆಗೆ ಗಂಭೀರ ಅಸ್ವಸ್ಥತೆಯನ್ನು ಅನುಭವಿಸಿದವು, ಯುವಕರ ಗುಂಪುಗಳು ಯೋಜಿತವಲ್ಲದ ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ದೊಡ್ಡ ಜನಸಂದಣಿಯು ರೂಪುಗೊಂಡಿತು" ಎಂದು ಸೆಪ್ಟೆಂಬರ್ 18, 2022 ರ ಭಾನುವಾರ ಹೇಳಿಕೆ ನೀಡಿದೆ. 

Follow Us:
Download App:
  • android
  • ios