Asianet Suvarna News Asianet Suvarna News

ವಿಜಯಪುರದಲ್ಲಿ ವಿಭಿನ್ನ ಮದುವೆ: ಗಂಡಿಗೆ ತಾಳಿ ಕಟ್ಟಿದ ವಧು..!

ವರ ವಧುವಿಗೆ ತಾಳಿ ಕಟ್ಟುವುದನ್ನು ನೋಡಿದ್ದೇವೆ ಆದ್ರೆ, ಇಲ್ಲೊಂದು  ಜೋಡಿ ಪರಸ್ಪರ ಇಬ್ಬರೂ ತಾಳಿ ಕಟ್ಟಿಕೊಳ್ಳುವ ಮೂಲಕ ಸತಿಪತಿಗಳಾಗಿದ್ದಾರೆ.

Bride Ties knot To Bridegroom in vijayapura
Author
Bengaluru, First Published Mar 12, 2019, 3:12 PM IST

ವಿಜಯಪುರ, (ಮಾ.12): ವಿಜಯಪುರ ‌ನಗರದ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ‌ ಬಸವ ತತ್ವದಡಿಯಲ್ಲಿ‌ ವಿಶೇಷ ಮದುವೆಯೊಂದು ನಡೆದಿದೆ.

 ಅಂತರ್ಜಾತಿ ವಿವಾಹದ ಜತೆಗೆ ಪರಸ್ಪರ ವಧು-ವರರು ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ. ಮಾರ್ಚ್ 10 ರಂದು ನಾಲತವಾಡದ ಹಳ್ಳೂರ್ ಪ್ಯಾಲೇಸ್‌ನಲ್ಲಿ ಬಸವ ತತ್ವದ ವಿವಾಹ ನಡೆಯಿತು. 

ಈ ವೇಳೆ ವಧು-ವರರಾದ ಉದ್ಯಮಿ ಪ್ರಭುರಾಜ್-ಅಂಕಿತಾ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಅಮಿತ್- ಪ್ರಿಯಾ ಪರಸ್ಪರ ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ.

 ಇನ್ನು ಈ ವಿವಾಹಕ್ಕೆ ಮಹೂರ್ತ‌ ನಿಗದಿ ಮಾಡಿರಲಿಲ್ಲ. ಅಲ್ಲದೆ ಅಕ್ಷತೆ ಹಾಕದೇ ಪುಷ್ಷವೃಷ್ಟಿ ಮಾಡಲಾಗಿದೆ. ಸಮಾನತೆಯ ಸಂಕೇತವಾಗಿ ವಧು ವರರು ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. 

ಈ ಮೂಲಕ ಗಂಡ-ಹೆಂಡತಿ ಇಬ್ಬರೂ ಸಮಾನರು ಎಂಬ ಸಂದೇಶ ರವಾನಿಸಿದ್ದಾರೆ. ಈ ವಿಶೇಷ ವಿವಾಹಕ್ಕೆ ವಿವಿಧ ಮಠಾಧೀಶರು ಸಾಕ್ಷಿಯಾದ್ದರು.

Follow Us:
Download App:
  • android
  • ios