Asianet Suvarna News Asianet Suvarna News

ಆಕ್ಸಿಜನ್ ಸಿಲಿಂಡರ್ ಹಾಕ್ಕೊಂಡು ಸುತ್ತುತ್ತಿರುವ ರೋಗಿ; ಬೆಡ್‌ ಮಾತ್ರ ಸಿಗ್ತಿಲ್ಲ!

ಯಾರು ಏನೇ ಹೇಳಿದ್ರು ರೋಗಿಗಳ ಗೋಳಾಟಕ್ಕೆ ಮುಕ್ತಿಯಿಲ್ಲದಂತಾಗಿದೆ. ಜೀವ ಉಳಿಸಿಕೊಳ್ಳಲು ರೋಗಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡೇ ಸುತ್ತಾಟ ನಡೆಸಿದ್ದಾರೆ. ಆಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಆಟೋದಲ್ಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ. 

ಬೆಂಗಳೂರು (ಜು. 19): ಯಾರು ಏನೇ ಹೇಳಿದ್ರು ರೋಗಿಗಳ ಗೋಳಾಟಕ್ಕೆ ಮುಕ್ತಿಯಿಲ್ಲದಂತಾಗಿದೆ. ಜೀವ ಉಳಿಸಿಕೊಳ್ಳಲು ರೋಗಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡೇ ಸುತ್ತಾಟ ನಡೆಸಿದ್ದಾರೆ. ಆಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಆಟೋದಲ್ಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ.

ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಹತ್ತಾರು ಆಸ್ಪತ್ರೆ ಸುತ್ತಾಡಿದ್ರೂ ಬೆಡ್‌ ಸಿಗುತ್ತಿಲ್ಲ. ಎರಡೆರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಕೋವಿಡ್ ನೆಗೆಟಿವ್ ಬಂದಿದ್ದರೂ ಯಾವ ಆಸ್ಪತ್ರೆಯೂ ಬೆಡ್ ಕೊಡಲು ನಿರಾಕರಿಸುತ್ತಿದ್ದಾರೆ. ಒಂದು ಕಡೆ ಸಿಎಂ ಬೆಡ್‌ ಕೊಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದರೂ ಅವರು ಮಾತ್ರ ಡೋಂಟ್ ಕೇರ್ ಅಂತಿವೆ. ರೋಗಿಗಳ ಪರದಾಟಕ್ಕೆ ಮುಕ್ತಿಯೇ ಇಲ್ಲದಂತಾಗಿದೆ. 

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌; ಪೌರ ಕಾರ್ಮಿಕನಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ನಕಾರ