ಉತ್ತರ ಕರ್ನಾಟಕ, ಕರಾವಳಿಯಲ್ಲಿ ಮತ್ತೆ 2 ದಿನ ಮಹಾಮಳೆ: ಹವಾಮಾನ ಮುನ್ಸೂಚನೆ
ಉತ್ತರ ಕರ್ನಾಟಕ ಭಾಗದಲ್ಲಿ ಈಗ ಬಂದಿರೋ ಮಳೆಯಿಂದಲೇ ಜನ ಒದ್ದಾಡುತ್ತಿದ್ದಾರೆ. ಗಂಟು ಮೂಟೆಗಳೊಂದಿಗೆ ಊರು ಬಿಡುತ್ತಿದ್ದಾರೆ. ಇದರ ಮೇಲೆ ಬರೆ ಎಂಬಂತೆ ನಾಳೆಯಿಂದ ಮತ್ತೆ ಮೂರು ದಿನಗಳ ಕಾಲ ಮಳೆ ಶುರುವಾಗಲಿದೆಯಂತೆ.
ಬೆಂಗಳೂರು (ಅ. 19): ಉತ್ತರ ಕರ್ನಾಟಕ ಭಾಗದಲ್ಲಿ ಈಗ ಬಂದಿರೋ ಮಳೆಯಿಂದಲೇ ಜನ ಒದ್ದಾಡುತ್ತಿದ್ದಾರೆ. ಗಂಟು ಮೂಟೆಗಳೊಂದಿಗೆ ಊರು ಬಿಡುತ್ತಿದ್ದಾರೆ. ಇದರ ಮೇಲೆ ಬರೆ ಎಂಬಂತೆ ನಾಳೆಯಿಂದ ಮತ್ತೆ ಮೂರು ದಿನಗಳ ಕಾಲ ಮಳೆ ಶುರುವಾಗಲಿದೆಯಂತೆ. ಹಾಗಾಗಿ ಉತ್ತರ ಕರ್ನಾಟಕದ ಜನ ಬಹಳ ಜಾಗೃತರಾಗಿ ಇರಬೇಕು. ಉತ್ತರ ಕರ್ನಾಟಕದಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.