ಕಾಂಗ್ರೆಸ್ನವರು ಸಿಎಂ ಕುರ್ಚಿಯ ಕನಸು ಕಾಣುತ್ತಿದ್ದಾರೆ; ನಾರಾಯಣ ಗೌಡ
- ಕಾಂಗ್ರೆಸ್ನವರು ಸಿಎಂ ಕುರ್ಚಿಯ ಕನಸು ಕಾಣುತ್ತಿದ್ದಾರೆ: ಸಚಿವ ನಾರಾಯಣ ಗೌಡ
- ಇನ್ನೆರಡು ವರ್ಷ ಬಿಎಸ್ವೈ ಸಿಎಂ
- 'ಮುಂದಿನ ಬಾರಿಯೂ ಬಿಎಸ್ವೈ ಅವರೇ ಸಿಎಂ'
ಬೆಂಗಳೂರು (ಜೂ. 30): 'ಕಾಂಗ್ರೆಸ್ನವರು ಸಿಎಂ ಕುರ್ಚಿಯ ಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಇನ್ನೆರಡು ವರ್ಷ ಬಿಎಸ್ವೈ ಸಿಎಂ ಆಗಿರ್ತಾರೆ. ಇನ್ನು ಮುಂದಿನ ಬಾರಿಯೂ ಬಿಎಸ್ವೈ ಅವರೇ ಸಿಎಂ' ಎಂದು ರಾಮನಗರದಲ್ಲಿ ಸಚಿವ ನಾರಾಯಣ ಗೌಡ ಹೇಳಿದ್ಧಾರೆ.
ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿ ಆಗ್ತಾರೆ, ಅವರದ್ದು ಆದಷ್ಟು ಬೇಗ ಕ್ಲಿಯರ್ ಆಗುತ್ತೆ. ಅವರ ಬಗ್ಗೆ ನಮಗೆ ಗೌರವ ಇದೆ. ನಾವೆಲ್ಲರೂ ಜೊತೆಗಿದ್ದವರು ಎಂದು ನಾರಾಯಣ ಗೌಡ ಹೇಳಿದ್ದಾರೆ.