Asianet Suvarna News Asianet Suvarna News

ಹ್ಯಾವ್ ಬಿಟ್ಟಿನಿ, ರಕ್ತಪಾತ ಬ್ಯಾಡ: ಮಹದೇವ ಭೈರಗೊಂಡ EXCLUSIVE!

ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ಭೀಮಾತೀರದ ಮಹದೇವ ಭೈರಗೊಂಡ ಸುವರ್ಣನ್ಯೂಸ್ ಜೊತೆ EXCLUSIVE ಮಾತುಕತೆ ನಡೆಸಿದ್ದಾರೆ.

ವಿಜಯಪುರ(ಮೇ.05): ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ಭೀಮಾತೀರದ ಮಹದೇವ ಭೈರಗೊಂಡ ಸುವರ್ಣನ್ಯೂಸ್ ಜೊತೆ   EXCLUSIVE ಮಾತುಕತೆ ನಡೆಸಿದ್ದು, ತಾನು ದ್ವೇಷದ ಹಾದಿ ಬಿಟ್ಟಿದ್ದು ರಕ್ತಪಾತ ನನಗೆ ಬೇಡ ಎಂದು ಹೇಳಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಭೈರಗೊಂಡ, ಹೊಂದಾಣಿಕೆಗೆ ಚಡಚಣ ಕುಟುಂಬದವರು 5 ಕೋಟಿ ಹಣ ಬೇಡಿಕೆ ಇಟ್ಟಿದ್ದರು ಆದರೆ ಹಣ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ. ಅಲ್ಲದೇ ಚಡಚಣ ಕುಟುಂಬದ ಮಲ್ಲಿಕಾರ್ಜುನ್ ನಿಂದ ತಮಗೆ ಜೀವ ಭಯ ಇದೆ ಎಂದು ಭೈರಗೊಂಡ ಆತಂಕ ಹೊರಹಾಕಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..