Asianet Suvarna News Asianet Suvarna News

ನಾನು ಚಾಮರಾಜಪೇಟೆ ಅಳಿಯ ಎಂದ ಹುಲಿಯಾ.. ! ಸಿದ್ದು ಮಾತಿನ ಮರ್ಮವೇನು..?

- ನಾನು ಚಾಮರಾಜಪೇಟೆ ಅಳಿಯ: ಸಿದ್ದರಾಮಯ್ಯ

- ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ

- ಸಿದ್ದರಾಮಯ್ಯ, ಚಾಮರಾಜಪೇಟೆ, ಜಮೀರ್ ನಂಟು ಎಂಥದ್ದು.?

First Published Jul 7, 2021, 4:31 PM IST | Last Updated Jul 7, 2021, 4:44 PM IST

ಬೆಂಗಳೂರು (ಜು. 07): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಮೇಲೆ ಪ್ರೀತಿ ಹೆಚ್ಚಾಗುವಂತೆ ಕಾಣಿಸುತ್ತಿದೆ.  ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಾನು ‘ಚಾಮರಾಜಪೇಟೆ ಅಳಿಯ’ಎಂದಿದ್ದಾರೆ.

HDL VS ಸುಮಲತಾ; ಅಕ್ರಮ ಗಣಿಗಾರಿಕೆ ವಿರುದ್ಧ ರೆಬಲ್ ಸಂಸದೆ ಸಮರ

ಬಾದಾಮಿ ಕ್ಷೇತ್ರ ತ್ಯಜಿಸಿ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆಯಿಂದಲೇ ಸ್ಪರ್ಧಿಸುತ್ತಾರಾ ಎಂದುಕೊಂಡರೆ ಅದಕ್ಕೂ ಕೂಡಾ ಉತ್ತರ ಕೊಟ್ಟಿದ್ಧಾರೆ. ನಾನು ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಹಾಗಾದರೆ ಚಾಮರಾಜಪೇಟೆಗೂ ಸಿದ್ದು ಏನೀ ಸಂಬಂಧ..? ಬಾದಾಮಿಯಿಂದಲೇ ಸ್ಪರ್ಧೆ ಖಚಿತಾನಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..