Asianet Suvarna News Asianet Suvarna News

ಆರೋಗ್ಯ ವಿಮೆ ಬಾಂಡ್‌ ವಂಚನೆ; ನುಣುಚಿಕೊಳ್ಳಲೆತ್ನಿಸಿದ ಶಾಸಕರನ್ನು ಕಟ್ಟಿ ಹಾಕಿದ ಸುವರ್ಣ ನ್ಯೂಸ್

ತುಮಕೂರು ಜೆಡಿಎಸ್‌ ಶಾಸಕ ಗೌರಿ ಶಂಕರ್  ಮೇಲೆ 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನಕಲಿ ವಿಮಾ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಶಾಸಕರ ಮೇಲೆ FIR ಕೂಡಾ ದಾಖಲಾಗಿದೆ. ತನಿಖೆಯೂ ನಡೆಯಲಿದೆ. 

ಬೆಂಗಳೂರು (ಜು. 21): ತುಮಕೂರು ಜೆಡಿಎಸ್‌ ಶಾಸಕ ಗೌರಿ ಶಂಕರ್  ಮೇಲೆ 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನಕಲಿ ವಿಮಾ ಬಾಂಡ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಶಾಸಕರ ಮೇಲೆ FIR ಕೂಡಾ ದಾಖಲಾಗಿದೆ. ತನಿಖೆಯೂ ನಡೆಯಲಿದೆ. 

ಬಯಲಾಯ್ತು ಮಹಾ ವಂಚನೆ, FIR ದಾಖಲು; ಪ್ರಭಾವಿ ಶಾಸಕನಿಗೆ ಬಂಧನ ಭೀತಿ?

ಈ ಕೇಸ್‌ ಬಗ್ಗೆ ಶಾಸಕ ಗೌರಿ ಶಂಕರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ, 'ನನಗೂ ಕೇಸ್‌ಗೂ ಸಂಬಂಧವಿಲ್ಲ. ತನಿಖೆ ನಡೆಯಲಿ. ಸತ್ಯ ಹೊರ ಬರಲಿ' ಎಂದು ನುಣುಕಿಕೊಳ್ಳಲು ಪ್ರಯತ್ನಿಸಿದರು. ಆದರೆ ಸುವರ್ಣ ನ್ಯೂಸ್ ಶಾಸಕರನ್ನು ಬಿಡದೇ ಪ್ರಶ್ನೆ ಕೇಳಿದಾಗ ಗರಂ ಆದ ಗೌರಿಶಂಕರ್ ಉತ್ತರಿಸಿದ್ದು ಹೀಗೆ..