Asianet Suvarna News Asianet Suvarna News

ಬಯಲಾಯ್ತು ಮಹಾ ವಂಚನೆ, FIR ದಾಖಲು; ಪ್ರಭಾವಿ ಶಾಸಕನಿಗೆ ಬಂಧನ ಭೀತಿ?

ಶಾಸಕರೊಬ್ಬರ ಮಹಾ ವಂಚನೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.  ತಮ್ಮ ವಂಚನೆಯನ್ನು ಮುಚ್ಚಿ ಹಾಕಲು 2 ವರ್ಷ ಕಳ್ಳಾಟವಾಡಿದ್ದರು ಈ ಶಾಸಕರು. ಕೊನೆಗೂ ಪ್ರಧಾನಿ ಕಚೇರಿ, ಸಿಎಂ ಕಚೇರಿ ಮಧ್ಯ ಪ್ರವೇಶದ ನಂತರ ಪ್ರಭಾವಿ ಶಾಸಕರ ವಿರುದ್ಧ FIR ದಾಖಲಾಗಿದೆ. 
 

ಬೆಂಗಳೂರು (ಜು. 21): ಶಾಸಕರೊಬ್ಬರ ಮಹಾ ವಂಚನೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.  ತಮ್ಮ ವಂಚನೆಯನ್ನು ಮುಚ್ಚಿ ಹಾಕಲು 2 ವರ್ಷ ಕಳ್ಳಾಟವಾಡಿದ್ದರು ಈ ಶಾಸಕರು. ಕೊನೆಗೂ ಪ್ರಧಾನಿ ಕಚೇರಿ, ಸಿಎಂ ಕಚೇರಿ ಮಧ್ಯ ಪ್ರವೇಶದ ನಂತರ ಪ್ರಭಾವಿ ಶಾಸಕರ ವಿರುದ್ಧ FIR ದಾಖಲಾಗಿದೆ. 

ಜುಲೈ 18 ರಂದು FIR ದಾಖಲಾಗುತ್ತಿದ್ದಂತೆ ಗೌರಿಶಂಕರ್‌ಗೆ ಬಂಧನದ ಭೀತಿ ಎದುರಾಗಿದೆ. ಚುನಾವಣೆ ವೇಲೆ ಪೋಷಕರಿಂದ ವೋಟ್ ಪಡೆಯಲು ಮಕ್ಕಳಿಗೆ ಆರೋಗ್ಯ ವಿಮೆ ಬಾಂಡ್ ಆಮಿಷವೊಡ್ಡಿದ್ದರು. ಪೋಷಕರಿಗೆ ಬಾಂಡನ್ನೂ ನೀಡಿದ್ದರು.  ಆದರೆ ಆ ಆರೋಗ್ಯ ವಿಮೆ ಬಾಂಡ್ ನಕಲಿ ಎಂದು ತಿಳಿದು ಬಂದಿದೆ. ವಿಮೆ ಕಂಪನಿಯೇ ಇದು ನಕಲಿ ಎಂದು ಹೇಳಿದೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ DM ವಿರುದ್ಧವೂ ಕೇಸ್ ದಾಖಲಾಗಿದೆ. 

ಕುಮಾರಸ್ವಾಮಿ ಸರ್ಕಾರ ಪತನವಾಗಿ ಒಂದು ವರ್ಷ; ನಾಳೆ ಎಚ್‌ಡಿಕೆ ವಿಡಿಯೋ ಕಾನ್ಫರೆನ್ಸ್‌

Video Top Stories