Asianet Suvarna News Asianet Suvarna News

ಕನಕಪುರ ಬಂಡೆ ಟೆಂಪಲ್ ರನ್; ದುರ್ಗಾಮಾತೆ ಮೊರೆ ಹೋದ ಡಿಕೆಶಿ

ಯಾದಗಿರಿಯ ಗಡೆ ದುರ್ಗಾದೇವಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕಳೆದ ವರ್ಷ ಜಾತ್ರೆಗೆ ಬರೋದಾಗಿ ಮುಡಿಪು ಕಟ್ಟಿದ್ದರು ಡಿಕೆಶಿ. ಆದರೆ ರಾಜಕೀಯ ಬೆಳವಣಿಗೆಗಳ ಮಧ್ಯೆ ಜಾತ್ರೆಗೆ ಹೋಗಿರಲಿಲ್ಲ. ಇದೀಗ ದುರ್ಗಾ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಟೆಂಪಲ್ ರನ್ ಮೋರೆ ಹೋಗಿದ್ದಾರೆ. 

ಬೆಂಗಳೂರು (ಜ. 29): ಕೆಪಿಸಿಸಿ ಅಧ್ಯಕ್ಷ ಪಟ್ಟ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವುದರಿಂದ ಡಿಕೆ ಶಿವಕುಮಾರ್ ಯಾದಗಿರಿಯ ಗಡೆ ದುರ್ಗಾದೇವಿ ದರ್ಶನಕ್ಕೆ ತೆರಳಿದ್ದಾರೆ. ಡಿಕೆಶಿ ಇಡಿ ಕೈಯಲ್ಲಿ ಸಿಲುಕಿದಾಗ ಅವರನ್ನು ರಕ್ಷಿಸಿದ್ದು ಇದೇ ದುರ್ಗಾದೇವಿ ಎಂಬುದು ಅವರ ನಂಬಿಕೆ. 

ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?

ಯಾದಗಿರಿಯ ಗಡೆ ದುರ್ಗಾದೇವಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕಳೆದ ವರ್ಷ ಜಾತ್ರೆಗೆ ಬರೋದಾಗಿ ಮುಡಿಪು ಕಟ್ಟಿದ್ದರು ಡಿಕೆಶಿ. ಆದರೆ ರಾಜಕೀಯ ಬೆಳವಣಿಗೆಗಳ ಮಧ್ಯೆ  ಜಾತ್ರೆಗೆ ಹೋಗಿರಲಿಲ್ಲ. ಇದೀಗ ದುರ್ಗಾ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಟೆಂಪಲ್ ರನ್ ಮೋರೆ ಹೋಗಿದ್ದಾರೆ. 

 

Video Top Stories