Asianet Suvarna News Asianet Suvarna News

ಕಬ್ಬನ್‌ಪಾರ್ಕ್‌ಗೆ ಹೋಗುವವರು ಗಮನಿಸಿ; ನಿಮ್ಮ ವಾಹನಗಳಿಗೆ ಸಂಚಾರ ನಿಷೇಧ?

ಕಬ್ಬನ್‌ ಪಾರ್ಕ್‌ನ್ನು ಪರಿಸರ ಸ್ನೇಹಿಯನ್ನಾಗಿಸಲು ವಾಹನ ಸಂಚಾರ ನಿಷೇಧಿಸುವಂತೆ ತೋಟಗಾರಿಕಾ ಸಚಿವ ಡಾ. ಕೆ. ಸಿ ನಾರಾಯಣ ಗೌಡ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು (ಆ. 26): ಕಬ್ಬನ್‌ ಪಾರ್ಕ್‌ನ್ನು ಪರಿಸರ ಸ್ನೇಹಿಯನ್ನಾಗಿಸಲು ವಾಹನ ಸಂಚಾರ ನಿಷೇಧಿಸುವಂತೆ ತೋಟಗಾರಿಕಾ ಸಚಿವ ಡಾ. ಕೆ. ಸಿ ನಾರಾಯಣ ಗೌಡ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. 

ಲಾಕ್‌ಡೌನ್‌ ಬಳಿಕ ವಾಹನ ಸಂಚಾರ ನಿಷೇಧವಾಗಿತ್ತು. ಆದರೆ ಸೋಮವಾರದಿಂದ ಮತ್ತೆ ವಾಹನ ಸಂಚಾರ ಆರಂಭವಾಗಿದೆ. ವಾಹನ ಸಂಚಾರ ಖಂಡಿಸಿ ನಡಿಗೆದಾರರು ಪ್ರತಿಭಟನೆ ಮಾಡಿದ್ದಾರೆ.  ಕಬ್ಬನ್ ಪಾರ್ಕನ್ನು ಸಂಪೂರ್ಣ ಪರಿಸರ ಸ್ನೇಹಿಯನ್ನಾಗಿಸಲು, ಪರಿಸರವನ್ನು ಉಳಿಸಲು ವಾಹನ ಸಂಚಾರ ನಿಷೇಧಿಸಬೇಕು ಎಂದು ಸಿಎಂರಲ್ಲಿ ಮನವಿ ಮಾಡಲಾಗಿದೆ.  ಸಿಎಂ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. 

ಸಿಎಂ ಮನೆಯ ಹಸುವಿನ ಸಗಣಿ, ಬಳಸಿ ಕಬ್ಬನ್ ಪಾರ್ಕಲ್ಲಿ ಗೊಬ್ಬರ!

Video Top Stories