ಡಿಕೆ ಸಾಹೇಬ್ರು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಿದ್ದೇನೆ: ಕ್ಷಮೆಯಾಚಿಸಿದ ಸಲೀಂ
- ಡಿಕೆಶಿ ಪರ್ಸಂಟೇಜ್ ಗಿರಾಕಿ: ಕಾಂಗ್ರೆಸ್ ನಾಯಕರ ಮಾತು!
- ವಿಡಿಯೋ ವೈರಲ್: ತೀವ್ರ ರಾಜಕೀಯ ಸಂಚಲನ, ಕಾಂಗ್ರೆಸ್ಗೆ ಮುಜುಗರ
- ಸಿದ್ದು, ಡಿಕೆಶಿ ಬಣ ರಾಜಕೀಯದ ಫಲಿತಾಂಶ ಇದು: ಬಿಜೆಪಿ, ಜೆಡಿಎಸ್ ಟೀಕೆ
ಬೆಂಗಳೂರು (ಅ. 14): ‘ಶಿವಕುಮಾರ್ ಭ್ರಷ್ಟಾಚಾರಿ’ ಎಂಬ ರೀತಿಯಲ್ಲಿ ಸಲೀಂ, ‘ಆತ ಕಲೆಕ್ಷನ್ ಗಿರಾಕಿ. ಅವರ ಹುಡುಗನೇ 50ರಿಂದ 100 ಕೋಟಿ ಮಾಡಿದ್ದಾನೆ ಅಂದರೆ ಡಿಕೆಶಿ ಹತ್ತಿರ ಇನ್ನೆಷ್ಟಿರಬೇಕು..? ದೊಡ್ಡ ಸ್ಕಾ್ಯಮ್ ಇದೆ. ಕೆದಕುತ್ತಾ ಹೋದರೆ ಇವರದ್ದೂ ಬರುತ್ತದೆ’ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ಹೇಳಿದ್ದು ಭಾರೀ ಚರ್ಚೆಗೆ ಆಸ್ಪದವಾಗಿದೆ.
ಕಮಿಷನ್ ಗಿರಾಕಿ.. ಕೈ ಕೊತ ಕೊತ..ಡಿಕೆಶಿ ರೋಷಾವೇಷ!
ಈ ಬಗ್ಗೆ ಸಲೀಂ, ಡಿಕೆಶಿ ಕ್ಷಮೆ ಕೇಳಿದ್ದಾರೆ. 'ಜೀವನದಲ್ಲಿ ನಾನು ಮಾಡಬಾರದ ತಪ್ಪು ಮಾಡಿದ್ದೇನೆ. ಡಿಕೆಶಿಯವರು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ತಯಾರಿದ್ದೇನೆ. ಜೀವ ತೆಗೆದರೂ ಸಿದ್ದನಿದ್ದೇನೆ' ಎಂದಿದ್ದಾರೆ.