Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಹೆಚ್ಚಾದ ಸಂಕಷ್ಟ, ಮುಡಾ ಕಚೇರಿ ಮೇಲೆ ಇಡಿ ದಾಳಿ!

ಮುಡಾ ಪ್ರಕರಣದ ತನಿಖೆ ಬಿಗಿಯಾಗಿದೆ. ಇದೀಗ ಮುಡಾ ಅಂಗಳಕ್ಕೆ ಇಡಿ ದಾಳಿ ಮಾಡಿದೆ. ಮೂರು ಕಡೆಗಳಲ್ಲಿ ಇಡಿ ದಾಳಿ ಮಾಡಿದೆ. ಒರಿಜಿನಲ್ ಕಾಪಿ ನೀಡುವಂತೆ ದಾಳಿ ವೇಳೆ ಸೂಚಿಸಿದೆ. 

First Published Oct 18, 2024, 11:42 PM IST | Last Updated Oct 18, 2024, 11:42 PM IST

ಬೆಂಗಳೂರು(ಅ.18)  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದಸರಾ ಹಬ್ಬದ ಮುಗಿದ ಬೆನ್ನಲ್ಲೇ ಸಂಕಷ್ಟ ಹೆಚ್ಚಾಗಿದೆ. ಇದೀಗ ಇಡಿ ಏಕಾಏಕಿ ಮುಡಾ ಕಚೇರಿ ಮೇಲೆ ದಾಳಿ ಮಾಡಿದೆ. ಮೈಸೂರು ತಾಲೂಕೂ ಕಚೇರಿ, ಸಿಎಂ ಆಪ್ತ ದೇವರಾಜು ಮನೆ ಮೇಲೂ ದಾಳಿ ಮಾಡಿದೆ. ಇದೀಗ ಕಚೇರಿ, ಮನೆ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಇತ್ತ ಇಡಿ ದಾಳಿ ಸೂಚನೆಯಿಂದಲೇ ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.