ಬಿಜೆಪಿಯವರು ಸಿ.ಡಿ ಪ್ರೊಡಕ್ಷನ್ ಹೌಸ್ ಆರಂಭಿಸಲಿ: ಸಿ.ಟಿ ರವಿಗೆ ರಕ್ಷಾ ರಾಮಯ್ಯ ಟಾಂಗ್!
'ಬಿಜೆಪಿಯವರಿಗೆ ಕ್ಯಾಂಟೀನ್ ಕಟ್ಟುವ ಯೋಗ್ಯತೆ ಇಲ್ಲ. ಅವರೇ ಒಂದು ಕ್ಯಾಂಟೀನ್ ಕಟ್ಟಿಕೊಂಡು ಏನ್ ಹೆಸರು ಬೇಕಾದ್ರೂ ಇಟ್ಕೊಳ್ಳಿ' ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಸಿ.ಟಿ ರವಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಆ. 13): ನೆಹರೂ ಹುಕ್ಕಾಬಾರ್ ತೆರೆಯಲಿ ಎಂಬ ಸಿ. ಟಿ ರವಿ ಹೇಳಿಕೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ತಿರುಗೇಟು ನೀಡಿದ್ದಾರೆ. 'ಬಿಜೆಪಿಯವರಿಗೆ ಕ್ಯಾಂಟೀನ್ ಕಟ್ಟುವ ಯೋಗ್ಯತೆ ಇಲ್ಲ. ಅವರೇ ಒಂದು ಕ್ಯಾಂಟೀನ್ ಕಟ್ಟಿಕೊಂಡು ಏನ್ ಹೆಸರು ಬೇಕಾದ್ರೂ ಇಟ್ಕೊಳ್ಳಿ' ಎಂದಿದ್ಧಾರೆ.
ಆನಂದ್ ಸಿಂಗ್ ಹೊಸಪೇಟೆ ಶಾಸಕರ ಕಚೇರಿ ಓಪನ್, ಸಂಧಾನ ಸಕ್ಸಸ್.?
'ಇತ್ತೀಚಿಗೆ ಬಿಜೆಪಿ ನಾಯಕರ ಸಿ.ಡಿಗಳು ಹೊರ ಬಂದಿದೆ. ಸಿ.ಡಿ ಪ್ರೊಡಕ್ಷನ್ ಹೌಸನ್ನೇ ತೆರೆಯಲಿ. ಈ ರೀತಿ ಹೇಳಿಕೆ ಕೊಡುವುದು ರವಿಯವರ ಸಂಸ್ಕೃತಿ ತೋರಿಸುತ್ತದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಉಗ್ರ ಹೋರಾಟ ಮಾಡುತ್ತೇವೆ' ಎಂದು ಹೇಳಿದ್ಧಾರೆ.