Asianet Suvarna News Asianet Suvarna News

ಬಿಜೆಪಿ MLC ಟಿಕೆಟ್‌ ರೇಸ್‌ಗಿಳಿದ ಮೂವರು ಮಾಜಿ ಶಾಸಕರು..!

ವಿಧಾನ ಪರಿಷತ್‌ಗೆ ಮೂವರನ್ನು ನೇಮಿಸಿ, ಮಾತಿನಂತೆ ಮಿನಿಸ್ಟರ್ ಮಾಡಿ ಎಂದು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ, ಮಸ್ಕಿ ಮಾಜಿ ಶಾಸಕ ಪ್ರತಾಪ್‌ ಗೌಡ ಪಾಟೀಲ್ ಹಾಗೂ ರೋಷನ್ ಬೇಗ್ ಮುಖ್ಯಮಂತ್ರಿಗಳನ್ನು ದುಂಬಾಲು ಬಿದ್ದಿದ್ದಾರೆ.

ಬೆಂಗಳೂರು(ಜೂ.12): ಎಲ್ಲಾ ಪಕ್ಷಗಳು ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಬೆನ್ನಲ್ಲೇ, ಇದೀಗ ವಿಧಾನಪರಿಷತ್ ಚುನಾವಣೆ ಕಾವು ಪಡೆದುಕೊಳ್ಳಲಾರಂಭಿಸಿದೆ. ಬಿಜೆಪಿಯಿಂದ MLC ಸ್ಥಾನಕ್ಕೆ ಮೂವರು ಮಾಜಿ ಶಾಸಕರು ಬಲವಾದ ಲಾಬಿ ನಡೆಸುತ್ತಿದ್ದಾರೆ.

ವಿಧಾನ ಪರಿಷತ್‌ಗೆ ಮೂವರನ್ನು ನೇಮಿಸಿ, ಮಾತಿನಂತೆ ಮಿನಿಸ್ಟರ್ ಮಾಡಿ ಎಂದು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ, ಮಸ್ಕಿ ಮಾಜಿ ಶಾಸಕ ಪ್ರತಾಪ್‌ ಗೌಡ ಪಾಟೀಲ್ ಹಾಗೂ ರೋಷನ್ ಬೇಗ್ ಮುಖ್ಯಮಂತ್ರಿಗಳನ್ನು ದುಂಬಾಲು ಬಿದ್ದಿದ್ದಾರೆ.

ಕೊರೋನಾ ಬಿಕ್ಕಟ್ಟು ಸ್ವಾವಲಂಬನೆಗೆ ಸದಾವಕಾಶ: ಮೋದಿ

ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಮರು ಚುನಾವಣೆಯಾಗಬೇಕಿದೆ. ವಿಧಾನಸಭಾ ಚುನಾವಣೆಯಾಗುವವರೆಗೂ ನಮ್ಮನ್ನು ಪರಿಷತ್‌ಗೆ ನೇಮಕವಾಗಿ. ಚುನಾವಣೆ ಘೋಷಣೆಯಾದ ದಿನವೇ ನಾವು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಮುನಿರತ್ನ ಪ್ರತಾಪ್‌ ಗೌಡ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories