Spandana Vijay: ಶ್ರೀರಂಗಪಟ್ಟಣದಲ್ಲಿ ಸ್ಪಂದನಾ ಅಸ್ತಿ ವಿಸರ್ಜನೆ
ಸ್ಪಂದನಾ ಅಸ್ತಿ ವಿಸರ್ಜನೆ ಕಾರ್ಯ ಮುಕ್ತಾಯ
ಕಾವೇರಿ ನದಿಗೆ ಸ್ಪಂದನಾ ಅಸ್ತಿ ವಿಸರ್ಜನೆ
ತಾಯಿಯ ಅಸ್ತಿ ವಿಸರ್ಜನೆ ಮಾಡಿದ ಶೌರ್ಯ
ಮಂಡ್ಯ: ಸ್ಪಂದನಾ ನಿಧನ ಹಿನ್ನೆಲೆ ಶ್ರೀರಂಗಪಟ್ಟಣದ ಕಾವೇರಿ(cauvery) ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿದೆ. ಈ ಕಾರ್ಯದಲ್ಲಿ ಮೃತ ಸ್ಪಂದನಾ(Spandana) ಕುಟುಂಬ ಭಾಗಿಯಾಗಿತ್ತು. ಪತಿ ವಿಜಯ್ ರಾಘವೇಂದ್ರ(Vijay Raghavendra), ಪುತ್ರ ಶೌರ್ಯ, ಶ್ರೀ ಮುರುಳಿ, ಮಾವ ಚಿನ್ನೇಗೌಡ ಭಾಗಿಯಾಗಿದ್ದರು. ಅಸ್ಥಿ ತುಂಬಿದ ಕುಡಿಕೆ ಹಿಡಿದು ದುಃಖದಲ್ಲೇ ಆಗಮಿಸಿದ ವಿಜಯ್ ರಾಘವೇಂದ್ರ, ಶ್ರೀರಂಗಪಟ್ಟಣ ಕಾವೇರಿ ನದಿಯ ಸ್ನಾನಘಟ್ಟ ಬಳಿ ಅಸ್ಥಿ ವಿಸರ್ಜನೆ ಮಾಡಿದರು.ಸ್ಪಂದನಾ ಅವರ ಅಸ್ಥಿ ವಿಸರ್ಜನೆಗೂ ಮುನ್ನ ಮಗ ಶೌರ್ಯ ಮುಡಿ ತೆಗೆಸಿದ್ದಾನೆ. ಬಳಿಕ ಶ್ರದ್ಧಾ ಕಾರ್ಯದ ವಿಧಿ ವಿಧಾನ ನೆರವೇರಿಸಲಾಯಿತು. ಆನಂತರ ಅಸ್ಥಿಗೆ ಅಭಿಷೇಕ, ಅಸ್ಥಿ ನಾರಾಯಣ ಪೂಜೆ ಮಾಡಲಾಯಿತು. ಅಸ್ಥಿ ವಿಸರ್ಜನೆ ಬಳಿಕ ಪಿಂಡ ಪ್ರಧಾನವನ್ನು ಮಾಡಲಾಯಿತು.
ಇದನ್ನೂ ವೀಕ್ಷಿಸಿ: ಪರಭಾಷೆ ಚಿತ್ರಗಳ ಆರ್ಭಟ..ಕನ್ನಡ ಸಿನಿಮಾಗಳಿಗೆ ಸ್ಕ್ರೀನ್ ಬರ..!