Asianet Suvarna News Asianet Suvarna News

ಚಿರು ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡ ಬಿಗ್‌ಬಾಸ್ ಪ್ರಥಮ್

ಎಲ್ಲರ ಪ್ರೀತಿಯ 'ಚಿರು', ಸ್ಯಾಂಡಲ್‌ವುಡ್ 'ಗಂಡೆದೆ' ವೀರ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂದು ಯಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ವಿಪರ್ಯಾಸ. ಇವರ ಒಡನಾಟವನ್ನು ನೆನೆಸಿಕೊಂಡು ನಟ ಪ್ರಥಮ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಬೆಂಗಳೂರು (ಜೂ. 08): ಎಲ್ಲರ ಪ್ರೀತಿಯ 'ಚಿರು', ಸ್ಯಾಂಡಲ್‌ವುಡ್ 'ಗಂಡೆದೆ' ವೀರ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂದು ಯಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ವಿಪರ್ಯಾಸ. ಇವರ ಒಡನಾಟವನ್ನು ನೆನೆಸಿಕೊಂಡು ನಟ ಪ್ರಥಮ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

10 ವರ್ಷದ ಪ್ರೀತಿ; ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಮೇಘನಾ ರಾಜ್!

' ಚಿರು ನನಗೆ ಒಳ್ಳೆಯ ಸ್ನೇಹಿತನಾಗಿದ್ದ. 3 ದಿನಗಳ ಹಿಂದೆ ಕರೆ ಮಾಡಿ ಮಾತನಾಡಿದ್ದೆ. ಯಾವಾಗಲೂ ಸಪೋರ್ಟೀವ್ ಆಗಿ ಮಾತನಾಡುತ್ತಿದ್ದರು. ಸ್ಕ್ಷಿಪ್ಟ್ ಬಗ್ಗೆಯೂ ಚರ್ಚಿಸಿಯೂ ಇದ್ದೆ. ನನ್ನ ಬರ್ತಡೇಗೂ ಕಾಲ್‌ ಮಾಡಿ ವಿಶ್ ಮಾಡಿದ್ದ. ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ' ಎಂದು ಪ್ರಥಮ್ ಹೇಳಿದ್ದಾರೆ.