ಇನ್ನಾದ್ರೂ ಸಾಕು ಮಾಡಪ್ಪ ದೇವ್ರೇ: ರಂಗಾಯಣ ರಘು ತೀವ್ರ ಸಂತಾಪ

ಆಗಸ್ಟ್ 7ರಂದು ಬ್ಯಾಂಕಾಕ್‌ನಲ್ಲಿ ಮೃತಪಟ್ಟ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ನಟ ರಂಗಾಯಣ ರಘು  ಆಗಮಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

First Published Aug 9, 2023, 1:00 PM IST | Last Updated Aug 9, 2023, 1:36 PM IST

ಆಗಸ್ಟ್ 7ರಂದು ಬ್ಯಾಂಕಾಕ್‌ನಲ್ಲಿ ಮೃತಪಟ್ಟ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ನಟ ರಂಗಾಯಣ ರಘು, ನಟಿ ಉಮಾಶ್ರೀ ಆಗಮಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾಕೋ ಅವೆಲ್ಲ ಅಕಾಲ. ನೋವಿನ ಮೆರವಣಿಗೆ ನೋಡಲು ತುಂಬಾ ಕಷ್ಟ ಆಗುತ್ತೆ. ರಾಘು ಹಸುಗೂಸು. ತುಂಬಾ ಅನ್ಯೋನ್ಯವಾಗಿದ್ದ ಕುಟುಂಬ. ಯಾರಿಗೆ ಆಗ್ಲಿ ತುಂಬಾ ಹೊಟ್ಗಟೆ ಕಿಚ್ಚು ಆಗೋದು. ಮತ್ತೆ ಮತ್ತೆ ಅಣ್ಣಾವ್ರ ಕುಟುಂಬಕ್ಕೆ ಈ ಥರದ ಘಟನೆ ಆಗುತ್ತಿರುವುದು ನೋವಿದೆ. ಇನ್ನಾದ್ರೂ ಸಾಕು ಮಾಡಪ್ಪ ದೇವ್ರೇ ಅಂತ ನಾವು ಕೇಳಿಕೊಳ್ಳಬೇಕು. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಆ ಭಗವಂತನಲ್ಲಿ ಅಷ್ಟೇ ಕೇಳಿಕೊಳ್ಳುವುದು ಎಂದಿದ್ದಾರೆ.