ಅಡ್ವಾಣಿಗೆ ಅವಮಾನ ಮಾಡಿದವರಿಂದ ನಾವು ಪಾಠ ಕಲಿಯಬೇಕಿಲ್ಲ!
ಅಡ್ವಾಣಿ, ಜೋಶಿ, ತೇಜಸ್ವಿನಿಗೆ ಅವಮಾನ ಮಾಡಿದವರು ಯಾರು? ಪಕ್ಷದ ಹಿರಿಯ ನಾಯಕರಿಗೆ ಹೇಗೆ ಗೌರವ ಕೊಡಬೇಕು ಅನ್ನೋದನ್ನ ಬಿಜೆಪಿಯಿಂದ ಕಲಿಯಬೇಕಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಮಾ.4): ಯಾರಿಗೆ ಹೇಗೆ ಗೌರವ ಕೊಡಬೇಕು ಅನ್ನೋದನ್ನ ನಾವು ಮೋದಿಯಿಂದ ಕಲಿಯಬೇಕಾಗಿಲ್ಲ. ಮೋದಿಗೆ ರಾಜಕೀಯ ಜೀವದಾನ ಕೊಟ್ಟ ಅಡ್ವಾಣಿಯವರನ್ನ ಸೈಡ್ಲೈನ್ ಮಾಡಿದ್ದು ಯಾರು? ಮನೋಹರ್ ಜೋಶಿಯವರನ್ನ ಸೈಡ್ಲೈನ್ ಮಾಡಿದ್ದು ಯಾರು? ಕಾಂಗ್ರೆಸ್ನವರು ಮಾಡಿದ್ದಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಕುರ್ಚಿಗೆ ಅಂಟ್ಕೊಂಡು ಕುಳಿತಿರುವ ಬಿಜೆಪಿಯನ್ನು ಒದ್ದೋಡಿಸಬೇಕು: ಸಿದ್ಧರಾಮಯ್ಯ ವಾಗ್ದಾಳಿ
ಪಾಪ ಆರೆಸ್ಸೆಸ್ ಕೆಡರ್ನಿಂದ ಬಂದ ಅನಂತ್ ಕುಮಾರ್ ನಿಧನದ ಬಳಿಕ ಅವರ ಪತ್ನಿ ತೇಜಸ್ವಿನಿಗೆ ಟಿಕೆಟ್ ಕೊಟ್ರಾ? ನೀವು ಮಾಡಿರೋ ಅವಮಾನಗಳಿಗೆ ಲೆಕ್ಕವೇ ಇಲ್ಲ. ಗುಜರಾತ್ನಲ್ಲಿ ಕೇಶುಭಾಯಿ ಪಟೇಲ್ಗೆ ಅವಮಾನ ಮಾಡಿದವರು ಯಾರು ಮೋದಿಯವರೇ ಎಂದು ಕೇಳಿದ್ದಾರೆ.