Asianet Suvarna News Asianet Suvarna News

"ಪ್ರಚಾರಕ್ಕೇ ಬರಲ್ಲ" ಅಂದವರು ಸಿನಿಮಾ ಸ್ಟಾರ್‌ಗಳನ್ನೇ ಕರೆಸಿದ್ರು: 15 ದಿನದಲ್ಲಿ ವರುಣ ವಾರ್ ಲೆಕ್ಕಾಚಾರ ಬದಲಾಗಿದ್ದು ಹೇಗೆ ?

ವರುಣ ರಣರಂಗದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಸಂಚಲನ
ಸಿದ್ದು ವಿರುದ್ಧ ಸಡ್ಡು ಹೊಡೆದು ನಿಂತ ಕೇಸರಿ ಕಲಿ ಸೋಮಣ್ಣ
ಸಿದ್ದರಾಮಯ್ಯ ಭದ್ರಕೋಟೆಯಲ್ಲಿ ಸೋಮಣ್ಣ ಸೈಲೆಂಟ್ ಆಟ 

First Published May 7, 2023, 6:27 PM IST | Last Updated May 7, 2023, 6:27 PM IST

ಮೈಸೂರು: ವರುಣ ವಾರ್ ಗೆಲ್ಲಲು ಹೊರಟ ಸಿದ್ದರಾಮಯ್ಯನವರ ಸುತ್ತ ಸೋಮಣ್ಣ ಚಕ್ರವ್ಯೂಹ ಹೆಣೆದಿದ್ದಾರೆ. ವರುಣಾರಾಮಯ್ಯ ಸಿದ್ದು ಯಾರನ್ನ ಹರಕೆಯ ಕುರಿ ಅಂದಿದ್ರೋ, ಅವ್ರೇ ಸಿದ್ದರಾಮಯ್ಯಗೆ ಸಡ್ಡು ಹೊಡೆದು ನಿಂತಿದ್ದಾರೆ. ಸೋಮಣ್ಣ ಸ್ಪರ್ಧೆ ನಾಮಕಾವಸ್ತೆ ಅಂತಿದ್ದವರಿಗೆ ಅಚ್ಚರಿಯ ಮೇಲೆ ಅಚ್ಚರಿ ಕೊಡ್ತಾ ಇದೆ ವರುಣಾ ಅಖಾಡ. ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ಸಚಿವ ಸೋಮಣ್ಣ ದೊಡ್ಡ ಟೆನ್ಷನ್ ಕೊಟ್ಟಿದ್ದಾರೆ. ಒಂದ್ಕಡೆ ಸಡ್ಡು ಹೊಡೆದ ಸೋಮಣ್ಣ ಟೆನ್ಷನ್ ಆದ್ರೆ, ಮತ್ತೊಂದ್ಕಡೆ ಕೇಸರಿ ಚಾಣಕ್ಯನ ಚಕ್ರವ್ಯೂಹ. ವರುಣ ಕ್ಷೇತ್ರ ಸೇಫ್ ಅಂತ ಭಾವಿಸಿದ್ದ ಸಿದ್ದರಾಮಯ್ಯನವರಿಗೆ ಸೋಮಣ್ಣ ಸಡ್ಡು ಹೊಡೆದು ನಿಂತಿದ್ದಾರೆ. ಸಿದ್ದು ಸುತ್ತ ಕೇಸರಿ ಚಕ್ರವ್ಯೂಹವೇ ನಿರ್ಮಾಣವಾಗಿದೆ. ಈ ಚಕ್ರವ್ಯೂಹವನ್ನು ಮೆಟ್ಟಿ ನಿಂತು ಕರ್ಮಭೂಮಿಯ ಯುದ್ಧವನ್ನು ಸಿದ್ದರಾಮಯ್ಯ ಗೆಲ್ಲೋದೆ ದೊಡ್ಡ ಸವಾಲಾಗಿದೆ. 

ಇದನ್ನೂ ವೀಕ್ಷಿಸಿ: ಬಿಜೆಪಿ ಕೈ ಹಿಡಿಯುತ್ತಾ ರೋಡ್‌ ಶೋ ತಂತ್ರ: ಕರ್ನಾಟಕದಲ್ಲಿ ಎಷ್ಟು ಸ್ಥಾನ ಗೆಲ್ಲಲಿದೆ ?