ಜನರ ಮಧ್ಯೆ ಮೋದಿ ಓಡಾಡಿಸುವ ಪ್ಲಾನ್ಗೆ ಮುಂದಾದ ಬಿಜೆಪಿ!
ಕರ್ನಾಟಕದ ನಾಲ್ಕು ದಿಕ್ಕುಗಳಿಂದ ಆರಂಭವಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆಯಲ್ಲಿ ಮಾ. 25ರಂದು ನಡೆಯಲಿದ್ದು. ಅದೇ ದಿನ ಯಾತ್ರೆಯ ಸಮಾರೋಪ ಸಮಾರಂಭ.
ಚುನಾವಣೆ ಕಾವು ಜೋರಾಗಿದ್ದು..ಮೋದಿ ಮೇನಿಯಾ ಶುರುವಾಗಿದೆ.ಕರ್ನಾಟಕದ ನಾಲ್ಕು ದಿಕ್ಕುಗಳಿಂದ ಆರಂಭವಾಗಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆಯಲ್ಲಿ ಮಾ. 25ರಂದು ನಡೆಯಲಿದ್ದು. ಅದೇ ದಿನ ಯಾತ್ರೆಯ ಸಮಾರೋಪ ಸಮಾರಂಭ ಆಗಲಿದೆ. ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಐತಿಹಾಸಿಕ ಸಮಾವೇಶ ಮಾಡಲು ಬಿಜೆಪಿ ನಿರ್ಧಾರ ಮಾಡಿದ್ದು, ಜನರ ಮಧ್ಯೆ ಮೋದಿ ಓಡಾಡಿಸುವ ಪ್ಲಾನ್ಗೆ ಮುಂದಾಗಿದೆ . ಜನರಿಗೆ ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡುವ ಅವಕಾಶ ಕೊಡುವ ಮೂಲಕ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದೇ ಬಿಜೆಪಿ ಗುರಿಯಾಗಿದೆ.