ಮತಬೇಟೆಗಿಳಿದ ಕೇಸರಿ ಪಡೆ: ರಾಜ್ಯಾದ್ಯಂತ ರಥಯಾತ್ರೆ, ದಾವಣಗೆರೆಯಲ್ಲಿ ಬೃಹತ್ ಸಮಾವೇಶ
ಪ್ರಗತಿ ರಥಯಾತ್ರೆ ಮೂಲಕ ಬಿಜೆಪಿ ಮತಬೇಟೆಗಿಳಿದಿದ್ದು, ಚುನಾವಣೆ ಜಯಿಸುವುದಕ್ಕಾಗಿ ಮಾರ್ಚ್ 1ರಿಂದ ನಾಲ್ಕು ತಂಡಗಳಾಗಿ ರಥಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಥಯಾತ್ರೆ ಸಂಚಾಲಕ ಸಿ.ಸಿ.ಪಾಟೀಲ್ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು (ಫೆ.25): ಪ್ರಗತಿ ರಥಯಾತ್ರೆ ಮೂಲಕ ಬಿಜೆಪಿ ಮತಬೇಟೆಗಿಳಿದಿದ್ದು, ಚುನಾವಣೆ ಜಯಿಸುವುದಕ್ಕಾಗಿ ಮಾರ್ಚ್ 1ರಿಂದ ನಾಲ್ಕು ತಂಡಗಳಾಗಿ ರಥಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಥಯಾತ್ರೆ ಸಂಚಾಲಕ ಸಿ.ಸಿ.ಪಾಟೀಲ್ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ 1ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಥಮ ಯಾತ್ರೆಗೆ ಚಾಲನೆ ದೊರೆಯಲಿದೆ. 1ನೇ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಚಾಲನೆ ನೀಡ್ತಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 2ನೇ ರಥಯಾತ್ರೆ ಶುರುವಾಗಲಿದೆ. 2ನೇ ರಥಯಾತ್ರೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡ್ತಾರೆ. 3 ಮತ್ತು 4ನೇ ರಥಯಾತ್ರೆಯನ್ನು ಅಮಿತ್ ಶಾ ಉದ್ಘಾಟನೆ ಮಾಡ್ತಾರೆ. ಅಂತಿಮವಾಗಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ದಾವಣಗೆರೆಯ ಸಮಾವೇಶ ನಡೆಯುವ ದಿನಾಂಕ ಇನ್ನು ಫಿಕ್ಸ್ ಆಗಿಲ್ಲ ಎಂದು ಹೇಳಿದ್ದಾರೆ.