Asianet Suvarna News Asianet Suvarna News

ಆನಂದ್ ಸಿಂಗ್ ಖಾತೆ ಕ್ಯಾತೆ: ಬದಲಾವಣೆಗೆ ಪಟ್ಟು, ಸಿಎಂಗೆ ಡೆಡ್‌ಲೈನ್ ಕೊಟ್ಟ ಸಚಿವರು..!

ಖಾತೆ ಹಂಚಿಕೆ ಬೆನ್ನಲ್ಲೇ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರು (ಆ. 09): ಖಾತೆ ಹಂಚಿಕೆ ಬೆನ್ನಲ್ಲೇ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ದೇಶದ ಮೊದಲ ತೃತೀಯ ಲಿಂಗಿ ಕ್ಲಿನಿಕ್ ಹೈದರಾಬಾದ್‌ನಲ್ಲಿ ಆರಂಭ

''ಪಕ್ಷವನ್ನು ಅಧಿಕಾರಕ್ಕೇರಿಸಲು ವೈಯಕ್ತಿಕ ಹಿತಾಸಕ್ತಿ ಮರೆತು ಕೆಲಸ ಮಾಡಿದ್ದೇನೆ. ಸರ್ಕಾರ ರಚನೆ ಸಂದರ್ಭದಲ್ಲಿ ನನಗೆ ಇಂಧನ ಖಾತೆ ಕೊಡುತ್ತೇನೆ ಎಂದಿದ್ದರು. ಕಳೆದ ಬಾರಿ ಖಾತೆ ಹಂಚಿಕೆ ವೇಳೆಯೂ ನನಗೆ ಬೇಡವಾಗಿದ್ದ ಖಾತೆ ನೀಡಿದ್ದರು. ನೋವಾಗಿದ್ದರೂ ಸುಮ್ಮನಾಗಿದ್ದೆ. ಪದೇ ಪದೇ ಹೀಗೆ ಆಗುತ್ತಿದೆ. ನಾನೇನು ಕಳಂಕಿತನಾ..? ಭ್ರಷ್ಟಾಚಾರಿನಾ..? ಆಗಸ್ಟ್ 15 ರ ವರೆಗೆ ಕಾಯುತ್ತೇನೆ. ನಂತರ ಮುಂದಿನ ನಿರ್ಧಾರ' ಎಂದು ಸಿಎಂ ಬೊಮ್ಮಾಯಿ ಎದುರು ನೇರವಾಗಿ ಹೇಳಿದ್ದಾರೆ. 

Video Top Stories