Karnataka Politics: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋಗಿ ಜಾರಿಬಿದ್ದ ಡಿಕೆಶಿ.. ತಳ್ಳಿದ್ದು ಯಾರು? ವಿಡಿಯೋ
* ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು
* ಸಿಎಂ ಬಸವರಾಜ ಬೊಮ್ಮಾಯಿ ನಿವಾಸ ಮುತ್ತಿಗೆ ಹಾಕಲು ಯತ್ನ
* ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
*ಬ್ಯಾರಿಕೇಡ್ ನಿಂದ ಆಯತಪ್ಪಿ ಬಿದ್ದ ಡಿಕೆ ಶಿವಕುಮಾರ್
ಬೆಂಗಳೂರು(ಏ. 14) ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil Suicide) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಬಂಧನವಾಗಬೇಕು ಎಂದು ಕಾಂಗ್ರೆಸ್ (Congress) ಬೀದಿಗೆ ಇಳಿದಿದೆ. ಡಿಕೆ ಶಿವಕುಮಾರ್(DK Shivakumar), ಸಿದ್ದರಾಮಯ್ಯ (Siddaramaiah) ಆದಿಯಾಗಿ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ನಾಯಕರನ್ನು ಬಂಧಿಸಲಾಯಿತು.
ಸಿಎಂ ಮನೆಗೆ ಮುತ್ತಿಗೆ ಹಾಕಲು ಬೀದಿಗೀಳಿದ ನಾಯಕರು
ಪೊಲೀಸರು ಬ್ಯಾರಿಕೇಡ್ ಹಾಕಲಿ ತಡೆಯುವ ಯತ್ನ ಮಾಡಿದಾಗ ಡಿಕೆ ಶಿವಕುಮಾರ್ ಬ್ಯಾರಿಕೇಡ್ ಮೇಲಕೆ ಹತ್ತುವ ಯತ್ನ ಮಾಡಿದರು. ಈ ಸಂದರ್ಭ ಆಯತಪ್ಪಿ ಬಿದ್ದ ಶಿವಕುಮಾರ್ ಅವರನ್ನು ಪೊಲೀಸರೇ ರಕ್ಷಣೆ ಮಾಡಿದರು.