Asianet Suvarna News Asianet Suvarna News

Karnataka Budget 2023: ಅವರು ಮಾಡಿದನ್ನೇ ಇವರೂ ಮಾಡ್ತೀದ್ದಾರೆ..ಬಜೆಟ್‌ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದನ್ನೇ ಈಗಿನ ಕಾಂಗ್ರೆಸ್‌ ಸರ್ಕಾರ ಮಾಡಿದೆ. ಬಿಲ್‌ ಪೆಂಡಿಗ್‌ ಇರಿಸಿಕೊಂಡು ಹೋಗುತ್ತಿದ್ದಾರೆ. 15 ಲಕ್ಷ ಮನೆ ಕಟ್ಸಿದ್ದೇವೆ ಅಂತಿದ್ದಾರೆ. ಅದೆಲ್ಲಿ ಕಟ್ಸಿದ್ದಾರೆಯೋ ನನಗೆ ಗೊತ್ತಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
 

First Published Jul 7, 2023, 8:25 PM IST | Last Updated Jul 7, 2023, 8:25 PM IST

ಬೆಂಗಳೂರು (ಜು.7): ಕಳೆದ ಬಾರಿ  ಬೊಮ್ಮಾಯಿ ಬಜೆಟ್‌ ಮಂಡಿಸುವಾಗ ಕಿವಿಗೆ ಚೆಂಡು ಹೂವು ಇಟ್ಕೊಬಂದವರೇ ಇವತ್ತು  ಕನ್ನಡನಾಡಿನ ಜನರ ತಲೆ ಮೇಲೆ ಹೂವ ಇಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸೋದು ಬಿಟ್ಟು ಏನಿಲ್ಲ ಎಂದು ಎಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.

2018ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿಕೊಂಡು ನಾವು ಅಧಿಕಾರ ಮಾಡಿದ್ದಾಗ ನೀರಾವರಿ ಇಲಾಖೆಯ ಯೋಜನೆಗಳ ಕ್ಯಾರಿ ಓವರ್‌ ಮಾಡಿದ್ದಾರೆ. ಆ ಬಳಿಕ ಬಿಜೆಪಿ ಸರ್ಕಾರವೂ ಕ್ಯಾರಿ ಓವರ್‌ ಮಾಡಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಕೂಡ ಅದನ್ನೇ ಮಾಡ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

ಬಿಜೆಪಿಯ ಆರ್ಥಿಕ ಶಿಸ್ತು ಬಗ್ಗೆ ಪ್ರಶ್ನೆ ಮಾಡಿದ್ದವರೇ ಈಗ ಅಶಿಸ್ತಿನ ಮಾರ್ಗ ಹಿಡಿದಿದ್ದಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಅದರೊಂದಿಗೆ ಇಡೀ ಬಜೆಟ್‌ನ ಪೋಸ್ಟ್‌ ಮಾರ್ಟಮ್‌ ಕೂಡ ಮಾಡಿದ್ದಾರೆ.