Asianet Suvarna News Asianet Suvarna News

ಒಕ್ಕಲಿಗರ ಕೋಟೆಯಲ್ಲಿ ಕಮಲ ಅರಳಿಸಲು ತಂತ್ರ, ಕರುನಾಡಲ್ಲಿಂದು ಯುಪಿ ಸಿಎಂ ಪ್ರಚಾರ..!

ಕೇಂದ್ರ ಸಚಿವ ಅಮಿತ್ ಶಾ ನಂತರ ಇಂದು ರಾಜ್ಯಕ್ಕೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಆಗಮಿಸುತ್ತಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಣ್ಣಿಟ್ಟಿದೆ.  

First Published Apr 26, 2023, 9:25 AM IST | Last Updated Apr 26, 2023, 9:24 AM IST

ಕೇಂದ್ರ ಸಚಿವ ಅಮಿತ್ ಶಾ ನಂತರ ಇಂದು ರಾಜ್ಯಕ್ಕೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಆಗಮಿಸುತ್ತಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಣ್ಣಿಟ್ಟಿದೆ.  ಮಂಡ್ಯಕ್ಕೆ ಪ್ರಧಾನಿ ಮೋದಿ , ಅಮಿತ್ ಶಾ ಭೇಟಿ ನೀಡಿ ಪ್ರಚಾರ ನಡೆಸಿದ್ದು,ಇದೀಗ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಮಂಡ್ಯ ಬಳಿಕ ನೇರವಾಗಿ ವಿಜಯಪುರಕ್ಕೆ  ತೆರಳಲಿದ್ದಾರೆ. ಇನ್ನು ಲಖನೌನಿಂದ ಮೈಸೂರಿಗೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್​​ ಮಂಡ್ಯದಲ್ಲಿ ನಡೆಯುವ ರೋಡ್​​ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಸವೇಶ್ವರರ ದರ್ಶನ ಪಡೆದು ನಂತರ ಬಸವನಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್​​.ಕೆ.ಬೆಳ್ಳುಬ್ಬಿ ಪರ ಪ್ರಚಾರ ಮಾಡಲಿದ್ದಾರೆ.