Asianet Suvarna News Asianet Suvarna News

News Hour: ವರುಣದಲ್ಲಿ ಜೋರಾದ ನಾಯಕರ ಟಾಕ್‌ವಾರ್‌!

ತನ್ನ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಗಣಿಸಿರುವ ವರುಣದಲ್ಲಿ ಬಿಜೆಪಿ ಹಾಗೂ ಅಭ್ಯರ್ಥಿ ವಿ ಸೋಮಣ್ಣ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ಸಿದ್ಧರಾಮಯ್ಯ ಕೂಡ ಶನಿವಾರ ವರುಣದ 16 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದಾರೆ.

First Published Apr 22, 2023, 11:56 PM IST | Last Updated Apr 22, 2023, 11:56 PM IST

ಬೆಂಗಳೂರು (ಏ.22): ಚುನಾವಣೆಗೆ ಇನ್ನು 18 ದಿನಗಳು ಮಾತ್ರವೇ ಬಾಕಿ ಉಳಿದಿವೆ. ರಾಜ್ಯದಲ್ಲಿ ಉಳಿದೆಲ್ಲಾ ಕ್ಷೇತ್ರಗಳದ್ದು ಒಂದು ತೂಕವಾದರೆ, ವರುಣ ಕ್ಷೇತ್ರದ್ದು ಇನ್ನೊಂದು ತೂಕ. ಸಿದ್ಧರಾಮಯ್ಯ ಅವರನ್ನು ತವರಿನಲ್ಲಿ ಸೋಲಿಸಲು ಬಿಜೆಪಿ ಸೋಮಣ್ಣರನ್ನು ಅಖಾಡಕ್ಕೆ ಇಳಿಸಿದೆ. ಇದರ ಬೆನ್ನಲ್ಲಿಯೇ ನಾಯಕರ ಟಾಕ್‌ ವಾರ್‌ ಕೂಡ ಜೋರಾಗಿದೆ.

ನಾನು ಭೂತವೂ ಅಲ್ಲ..ಪಿಶಾಚಿಯೂ ಅಲ್ಲ.. ನಾನೂ ಸಿದ್ಧರಾಮಯ್ಯ ಅವರ ಜೊತೆ ಕೆಲಸ ಮಾಡಿದ್ದೀನಿ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದ್ದಾರೆ. ಇನ್ನೊಂದೆಡೆ ವಿಜಯೇಂದ್ರ, ಈ ಬಾರಿ ವರುಣ ಕ್ಷೇತ್ರದಲ್ಲಿ ಸೋಮಣ್ಣ ಗೆದ್ದೆ ಗೆಲ್ತಾರೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ನಾನೂ ಸಮರ್ಥ, ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್‌ ಹಾಕಿದ್ರಾ ಲಿಂಗಾಯತ ನಾಯಕ ಎಂಬಿಪಾ?

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ವರುಣ ಕ್ಷೇತ್ರದಲ್ಲಿ ಮೆಗಾ ಶೋ ನಡೆಸಿದ್ದಾರೆ. 16 ಹಳ್ಳಿಗಳಲ್ಲಿ ಅವರು ಪ್ರಚಾರ ಕೈಗೊಂಡಿದ್ದಾರೆ. ರೋಡ್‌ ಶೋ ನಡೆಸಿ ಸಿದ್ಧರಾಮಯ್ಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಜನರು 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂದು ಘೋಷಣೆ ಕೂಗಿದರು.