ಕೊರೋನಾ ಲಸಿಕೆ: ಸೋತ್ರೆ ಜನರನ್ನ ಸಾಯಿಸ್ತೀರಾ? ಬಿಜೆಪಿಯ ವಿರುದ್ಧ ತಿರುಗಿಬಿದ್ದ ವಿಶ್ವನಾಥ್!
- ರಾಜ್ಯದಲ್ಲೂ ಸದ್ದು ಮಾಡುತ್ತಿದೆ ಕೊರೋನಾ ಲಸಿಕೆ ರಾಜಕೀಯ
- ಬಿಜೆಪಿ ಪ್ರಣಾಳಿಕೆ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕ ಎಚ್. ವಿಶ್ವನಾಥ್
- ಬಿಹಾರದಲ್ಲಿ ಗೆದ್ರೆ ಉಚಿತ ಕೊರೋನಾ ಲಸಿಕೆ ಭರವಸೆ ಕೊಟ್ಟಿರುವ ಬಿಜೆಪಿ
ಬೆಂಗಳೂರು (ಅ.23): ಬಿಹಾರದ ಬೆನ್ನಲ್ಲೇ ರಾಜ್ಯದಲ್ಲೂ ಕೊರೋನಾ ಲಸಿಕೆ ರಾಜಕೀಯ ಶುರುವಾಗಿದೆ. ಕೊರೋನಾ ಲಸಿಕೆಯನ್ನು ರಾಜಕೀಕರಣಗೊಳಿಸಿದ ಬಿಜೆಪಿ ಬಗ್ಗೆ ವಿಪಕ್ಷಗಳು ಟೀಕಿಸಿರುವ ಬೆನ್ನಲ್ಲೇ, ಬಿಜೆಪಿ ಪ್ರಣಾಳಿಕೆ ವಿರುದ್ಧ ಬಿಜೆಪಿ ನಾಯಕ ಎಚ್. ವಿಶ್ವನಾಥ್ ಕೂಡಾ ಗರಂ ಆಗಿದ್ದಾರೆ.
ಇದನ್ನೂ ನೋಡಿ | ಬಿಹಾರದಲ್ಲಿ ಬಿಜೆಪಿ ಗೆದ್ದರೆ ಉಚಿತ ಕೊರೊನಾ ಲಸಿಕೆ: ವಿವಾದ ಗುರಿಯಾಯ್ತು ಬಿಜೆಪಿ ನಿಲುವು...
ಬಿಹಾರದಲ್ಲಿ ಗೆದ್ರೆ ಉಚಿತ ಕೊರೋನಾ ಲಸಿಕೆ ಭರವಸೆ ಕೊಟ್ಟಿರುವ ಬಿಜೆಪಿ ನಿರ್ಧಾರವನ್ನು ಪಕ್ಷದ ನಾಯಕರು ಸ್ವಾಗತಿಸಿದ್ದರೆ, ಶಾಸಕ ಎಚ್. ವಿಶ್ವನಾಥ್ ಟೀಕಿಸಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಈ ಹಿಂದೆಯೂ ವಿಶ್ವನಾಥ್, ಟಿಪ್ಪು ಸುಲ್ತಾನ್ ಬಗ್ಗೆ ಹೊಗಳಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು.