Asianet Suvarna News Asianet Suvarna News

ಜೈಲಿಗೆ ಹೋಗಿದ್ದ ಕೇಸ್‌ನಲ್ಲೇ ಡಿಸಿಎಂಗೆ ಬಿಗ್ ರಿಲೀಫ್: ಡಿಕೆಶಿಗೆ ಸಂಕಷ್ಟ ತಂದೊಡ್ಡುತ್ತಾ ಅಕ್ರಮ ಆಸ್ತಿ ಸಂಪಾದನೆ ಕೇಸ್?

ಕನಕಪುರ ಬಂಡೆಯನ್ನು ಜೈಲಿಗೆ ಕಳುಹಿಸಿತ್ತು ಅದೊಂದು ಕೇಸ್..! ತಿಹಾರ್ ಜೈಲಿಗೆ ಹೋಗಲು ಕಾರಣವಾಗಿದ್ದ ಪ್ರಕರಣದಲ್ಲೇ ಡಿಕೆ ಶಿವಕುಮಾರ್ ಅವ್ರಿಗೆ ಸುಪ್ರೀಂ ಕೋರ್ಟ್'ನಿಂದ ಸಿಕ್ತು ಬಿಗ್ ರಿಲೀಫ್..! 

ಬೆಂಗಳೂರು (ಮಾ.06): ಕನಕಪುರ ಬಂಡೆಯನ್ನು ಜೈಲಿಗೆ ಕಳುಹಿಸಿತ್ತು ಅದೊಂದು ಕೇಸ್..! ತಿಹಾರ್ ಜೈಲಿಗೆ ಹೋಗಲು ಕಾರಣವಾಗಿದ್ದ ಪ್ರಕರಣದಲ್ಲೇ ಡಿಕೆ ಶಿವಕುಮಾರ್ ಅವ್ರಿಗೆ ಸುಪ್ರೀಂ ಕೋರ್ಟ್'ನಿಂದ ಸಿಕ್ತು ಬಿಗ್ ರಿಲೀಫ್..! ಇ.ಡಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್'ನಲ್ಲಿ ಮುಖಭಂಗ, ಡಿಕೆ ಸಾಹೇಬನ ಕಾನೂನು ಹೋರಾಟಕ್ಕೆ ಅತೀ ದೊಡ್ಡ ಜಯ..! ಕಾನೂನು ಅಸ್ತ್ರದಿಂದಲೇ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಚಾಣಾಕ್ಷ..! ದೊಡ್ಡ ಕಂಟಕದಿಂದ ಪಾರಾದ್ರಾ ಉಪಮುಖ್ಯಮಂತ್ರಿ..? ಇ.ಡಿ ಕೇಸ್'ನಲ್ಲಿ ಡಿಕೆಶಿಗೆ ಜಯ ಸಿಕ್ಕಿದ್ಹೇಗೆ..? ಇದು ನನ್ನ ಜೀವನದ ದೊಡ್ಡ ಸಂತಸದ ದಿನವೆಂದು ಡಿಕೆ ಹೇಳಿದ್ದೇಕೆ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಸೇಫ್ ಆದ್ರಾ ಡಿಕೆ..? ಇ.ಡಿ ಕೇಸ್'ನಿಂದ ಸೇಫ್ ಆದ ಮಾತ್ರಕ್ಕೆ ಡಿಕೆ ಶಿವಕುಮಾರ್ ಕಾನೂನು ಕುಣಿಕೆಯಿಂದ ಕಂಪ್ಲೀಟ್ ಆಗಿ ಪಾರಾದ್ರಾ..? ಖಂಡಿತಾ ಇಲ್ಲ, 

ಡಿಕೆ ಸಾಹೇಬನ ನೆತ್ತಿಯ ಮೇಲೆ ಅಪಾಯದ ಕತ್ತಿ ತೂಗುತ್ತಲೇ ಇದೆ. ಕ್ರಮ ಹಣ ವರ್ಗಾವಣೆ-ಹವಾಲ ಕೇಸ್'ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವ್ರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಇ.ಡಿ ಕೇಸ್'ನಿಂದ ಸೇಫ್ ಆದ ಮಾತ್ರಕ್ಕೆ ಡಿಕೆ ಶಿವಕುಮಾರ್ ಕಾನೂನು ಕುಣಿಕೆಯಿಂದ ಸಂಪೂರ್ಣವಾಗಿ ಪಾರಾದ್ರಾ..? ಖಂಡಿತಾ ಇಲ್ಲ, ಕನಕಪುರ ಬಂಡೆಯ ನೆತ್ತಿಯ ಮೇಲೆ ಅಪಾಯದ ಕತ್ತಿ ತೂಗುತ್ತಲೇ ಇದೆ. ಡಿ.ಕೆ.ಶಿವಕುಮಾರ್ ಅವರಿಗಿದ್ದದ್ದು 3 ಸಂಕಷ್ಟ. ಅದ್ರಲ್ಲಿ ಒಂದು ಸಂಕಷ್ಟ ನಿವಾರಣೆಯಾಗಿದೆ. ಉಳಿದೆರಡು ಸಂಕಷ್ಟಗಳಲ್ಲೂ ಕನಕಪುರ ಬಂಡೆಗೆ ರಿಲೀಫ್ ಸಿಗುತ್ತಾ..?  ಡಿಸಿಎಂ ಡಿಕೆ ಶಿವಕುಮಾರ್ ಸುತ್ತ 3 ಸಂಕಷ್ಟಗಳು ಸುತ್ತುತ್ತಾ ಇದ್ವು. ಅದ್ರಲ್ಲಿ ಒಂದು ಸಂಕಷ್ಟ, ಅಂದ್ರೆ ಇ.ಡಿ ಕಂಟಕ ನಿವಾರಣೆಯಾಗಿದೆ. ಉಳಿದೆರೋದು ಸಿಬಿಐ ಮತ್ತು ಐಟಿ ಕಂಟಕ.. ಈ ಸಂಕಷ್ಟಗಳಲ್ಲೂ ಕನಕಪುರ ಬಂಡೆಗೆ ರಿಲೀಫ್ ಸಿಗುತ್ತಾ..?