Asianet Suvarna News Asianet Suvarna News

ತೆರೆದ ವಾಹನದಲ್ಲಿ ಕೌರವ ಪ್ರಚಾರ: ಅಭಿವೃದ್ಧಿ ಕಾರ್ಯ ಪ್ರಸ್ತಾಪಿಸಿ ಮತಶಿಕಾರಿ

ಹಿರೇಕೇರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್‌ ಪ್ರಚಾರ
ಗ್ರಾಮಗಳಿಗೆ ತೆರಳಿ ಮತಯಾಚಿಸುತ್ತಿರುವ ಕೌರವ
ಜನ ಬಿಜೆಪಿ ಗೆಲ್ಲಿಸುವ ಭರವಸೆ ಇದೆ ಎಂದ ಪಾಟೀಲ್‌

ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಹಿರೇಕೇರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್‌ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇವರು ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ವಡೇರಹಳ್ಳಿ, ಎಲವದಹಳ್ಳಿ ಗ್ರಾಮಗಳಲ್ಲಿ ಮತಬೇಟೆಯನ್ನು ನಡೆಸುತ್ತಿದ್ದಾರೆ.  ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪ ಮಾಡುತ್ತಾ, ಮತದಾರರಲ್ಲಿ ಮತವನ್ನು ಕೇಳುತ್ತಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್‌, ಇಲ್ಲಿನ ಜನ ಬಿ.ಸಿ. ಪಾಟೀಲ್‌ರನ್ನು ಹಾಗೂ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿದ್ದೀರಿ. ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ: ಬೊಮ್ಮಾಯಿ

Video Top Stories