Asianet Suvarna News Asianet Suvarna News

ಚಿಕ್ಕಪೇಟೆ ಕಾಂಗ್ರೆಸ್‌ ಟಿಕೆಟ್‌ ಫೈಟ್‌ : ಕೆಜಿಎಫ್‌ ಬಾಬು ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಕೆ.ಜಿ.ಎಫ್ ಬಾಬು ಮನೆಗೆ ಬೆಂಕಿ
ಆರ್. ವಿ ದೇವರಾಜ್ ಅವರ ಮಗನ ಕೈವಾಡವಿದೆ ಎಂದು ಆರೋಪ
ರಾಜಕೀಯ ದ್ವೇಷದಿಂದ ಈ ರೀತಿ ಮಾಡ್ತಾ ಇದ್ದಾರೆ

ಬೆಂಗಳೂರು (ಫೆ.04): ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಅಭ್ಯರ್ಥಿಯೆಂದು ಹೇಳಿಕೊಂಡು ಓಡಾಡುತ್ತಿರುವ ಹಾಗೂ ಟಿಕೆಟ್‌ಗೆ ಪಟ್ಟು ಹಿಡಿದಿರುವ ಕೆ.ಜಿ.ಎಫ್‌ ಬಾಬು ಅವರ ಕೆ.ಎಸ್. ಗಾರ್ಡನ್‌ನಲ್ಲಿರುವ ಮನೆಗೆ ಆರ್‌.ವಿ. ದೇವರಾಜ್ ಪುತ್ರ ಯುವರಾಜ್ ಬೆಂಕಿ ಹಚ್ಚಿದ್ದಾನೆ ಎಂದು ಸ್ವತಃ ಕೆಜಿಎಫ್‌ ಬಾಬು ಆರೋಪ ಮಾಡಿದ್ದಾರೆ.
ಈ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಕೆಜಿಎಫ್‌ ಬಾಬು, ಕೆ ಎಸ್ ಗಾರ್ಡನ್ ನಲ್ಲಿ ಕೆ ಜಿಎಫ್ ಹಳೇ ಮನೆಗೆ ಬೆಂಕಿ ಹಾಕಿದ ವಿಚಾರವಾಗಿ ನಮ್ಮ ಸಹೋದರಿಗೆ ಯುವರಾಜ್ ಬಂದು ಧಮ್ಕಿ ಹಾಕಿದ್ದನು. ಹಾಕಿದ್ದಾರೆ.. ನಿಮ್ಮ ಅಣ್ಣನಿಗೆ ಹೇಳಿ. ನಮ್ಮ ತಂದೆ ಹಿಸ್ಟರಿ ಗೊತ್ತಿಲ್ವಾ ನಿಮಗೆ. ನಾನು ಕಾರ್ಪೊರೇಟರ್ ಆಗಿ ನಿಮಗೆ ತೊಂದರೆ ಏನು ಕೊಟ್ಟಿಲ್ಲ ಅಂತ ಹೇಳಿ ಹೋಗಿದ್ದರು. ಆದರೆ, ನಿನ್ನೆ ರಾತ್ರಿ ಬಂದು ಬೆಂಕಿ ಹಾಕಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

Assembly election: ಡಿಕೆಶಿ ನನ್ನ ಮನೆ ದೇವರು: ಕಾಂಗ್ರೆಸ್‌ನಿಂದ ತಳ್ಳಿದರೂ ಬಿಟ್ಟು ಹೋಗಲ್ಲ ಎಂದ ಕೆಜಿಎಫ್‌ ಬಾಬು

ನಾನು ಚುನಾವಣೆಯಲ್ಲಿ ನಿಲ್ತೀನಿ ಅಂತ ಆರ್. ಯುವರಾಜ್ ಹಾಗೂ ಅವರ ತಂದೆ ಆರ್.ವಿ. ದೇವರಾಜ್‌ ತೊಂದರೆ ಕೊಡ್ತಿದ್ದಾರೆ. ಈ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಗಳನ್ನ ಕಟ್ಟಿಸಿ ಕೊಡಲಾಗ್ತಿದೆ. ಇದಕ್ಕೆ ಈ ರೀತಿ ಮಾಡ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಈ ರೀತಿ ತೊಂದರೆ ಕೊಡುತ್ತಿದ್ದಾರೆ. ಈ ಮನೆಯಲ್ಲಿ ಕೆ.ಜಿ.ಎಫ್. ಬಾಬು ತಂಗಿ ಶಾಹೀತಾಜ್ ಹಾಗೂ ತಮ್ಮ ಮನ್ನು ವಾಸವಾಗಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಕೀಡಿಗೇಡಿಗಳು ಬಂದು ಬೆಂಕಿ ಹಚ್ಚಿ ಹೋಗಿದ್ದಾರೆ. ಮೊದಲು ಪೆಟ್ರೋಲ್ ಎರಚಿ ನಂತರ ಬೆಂಕಿ ಹಾಕಿದ್ದಾರೆ ಎಂದು ಎಸ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.