Asianet Suvarna News Asianet Suvarna News

ಸಿದ್ದು ಸೋಲಿಸಲು ಸೋಮಣ್ಣಗೆ ಟಾಸ್ಕ್‌: ಗೆದ್ದರೇ ದೊಡ್ಡ ಹುದ್ದೆ ಆಫರ್‌ ನೀಡಿದ ಶಾ

ಸಿದ್ದು ಸೋಲಿಸಿದ್ರೆ ಸೋಮಣ್ಣಗೆ ಬಂಪರ್‌ ಆಫರ್‌
ಸೋಮಣ್ಣಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಸಿಗುತ್ತಾ?
ತೀವ್ರ ಚರ್ಚೆಗೆ ಕಾರಣವಾದ ಅಮಿತ್‌ ಶಾ ಹೇಳಿಕೆ

First Published May 3, 2023, 11:51 AM IST | Last Updated May 3, 2023, 11:51 AM IST

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ವರುಣದಲ್ಲಿ ಸಚಿವ ವಿ. ಸೋಮಣ್ಣ ಸೋಲಿಸಿದ್ರೆ, ಬಂಪರ್‌ ಆಫರ್‌ ನೀಡಲಾಗುವುದು ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಅಮಿತ್‌ ಶಾ ವರುಣ ಸಮಾವೇಶದಲ್ಲಿ ಬಹಿರಂಗವಾಗಿ ಉನ್ನತ ಹುದ್ದೆ ನೀಡುವುದಾಗಿ ಹೇಳಿದ್ದಾರೆ. ಪಕ್ಷದಲ್ಲೋ ಅಥವಾ ಸರ್ಕಾರದಲ್ಲಿ ಉನ್ನತ ಹುದ್ದೆಯೋ, ಇಲ್ಲವೇ ಲಿಂಗಾಯತ ಲೀಡರ್‌ ಎಂಬ ಪಟ್ಟ ಸಿಗಲಿದೆಯಾ ಎಂಬುದು ಗೊತ್ತಿಲ್ಲ. ಆದ್ರೆ ಸಮಾವೇಶದಲ್ಲಿ ಅಮಿತ್‌ ಶಾ ಉನ್ನತ ಹುದ್ದೆ ನೀಡುವ ಕುರಿತು ಮಾತನಾಡಿರುವುದಂತೂ ಸತ್ಯ. ಈ ಮೂಲಕ ವರುಣದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ರಣತಂತ್ರ ಹೂಡಿದೆ. ಅಲ್ಲದೇ ಬಿಎಸ್‌ವೈ ಬಳಿಕ ಸೋಮಣ್ಣ ಲಿಂಗಾಯತ ಲೀಡರ್‌ ಆಗ್ತಾರಾ ಎಂಬ ಪ್ರಶ್ನೆ ಸಹ ಈಗ ಮೂಡಿದೆ.

ಇದನ್ನೂ ವೀಕ್ಷಿಸಿ: ಪ್ರಣಾಳಿಕೆಯಲ್ಲೂ ಯಟವಟ್ಟು ಮಾಡಿಕೊಳ್ತಾ ಕಾಂಗ್ರೆಸ್‌? : ಸಿಟ್ಟಿಗೆದ್ದಿರುವ ಹಿಂದೂಪರ ಸಂಘಟನೆಗಳು