ಅಧ್ಯಕ್ಷ ಗಾದಿಗೆ ರಾಹುಲ್ಗೆ ಬೇಲಿ ಹಾಕಿದ್ದು ಯಾರು? ಸಿದ್ದು ಪತ್ರದ ಸಾರಾಂಶ!
ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಲಿ/ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ/ ಕಾಂಗ್ರೆಸ್ ಒಳಗೆ ಗಾಂಧಿ ಪರಿವಾರದ ವಿರುದ್ಧ ಸದ್ದಿಲ್ಲದ ಸಮರ/ ರಾಹುಲ್ ಅಧ್ಯಕ್ಷರಾಗುವುದಕ್ಕೆ ಸೀನಿಯರ್ಸ್ ವಿರೋಧ
ಬೆಂಗಳೂರು(ಆ. 24) ಕಾಂಗ್ರೆಸ್ ಗೆ ಯಾರು ಅಧ್ಯಕ್ಷರಾಗಬೇಕು ಎಂಬ ಚರ್ಚೆ ನಡೆಯುತ್ತಲೇ ಇದೆ. ಕರ್ನಾಟಕದ ಮಾಜಿ ಸಿಎಂ , ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರೆದ ಪತ್ರದ ವಿಚಾರವೂ ಚರ್ಚೆಗೆ ಬಂದಿದೆ.
ದೊಡ್ಡ ನಾಯಕರ ಕಾಂಗ್ರೆಸ್ ಸಭೆಯಲ್ಲಿ ಅಂತಿಮವಾಗಿ ತೆಗೆದುಕೊಂಡ ತೀರ್ಮಾನ
ರಾಹುಲ್ ಗಾಂಧಿಯವರ ಬೆಂಬಲಕ್ಕೆ ಸಿದ್ದರಾಮಯ್ಯ ನಿಂತಿದ್ದು, ರಾಹುಲ್ ಅವರೇ ಅಧ್ಯಕ್ಷರಾಗಬೇಕು ಎಂದಿದ್ದಾರೆ. ಒಟ್ಟಿನಲ್ಲಿ ನಿಂತ ನೀರಾಗಿದ್ದ ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಗಾದಿ ವಿಚಾರ ಸಂಚಲನ ಮೂಡಿಸಿದೆ.