Asianet Suvarna News Asianet Suvarna News

ಸಿಎಂ ಭೇಟಿಯಾಗಲು ಕಂಬಳವೀರ ಶ್ರೀನಿವಾಸ ಗೌಡ ಬೆಂಗಳೂರಿಗೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನದ ಮೇರೆಗೆ ಕಂಬಳ ವೀರ ಶ್ರೀನಿವಾಸ್ ಗೌಡ ಬೆಂಗಳೂರಿಗೆ ಬಂದಿಳಿದ್ದಾರೆ. ಕ್ರೀಡಾ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಶ್ರೀನಿವಾಸ್ ಗೌಡಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಫೆ.17): ಕಂಬಳದಲ್ಲಿ ಮಿಂಚಿನ ಓಟದ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾದ ಶ್ರೀನಿವಾಸ್ ಗೌಡ ಇದೀಗ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನದ ಮೇರೆಗೆ ರಾಜ್ಯ ರಾಜಧಾನಿಗೆ ಬಂದಿದ್ದಾರೆ.

ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!

ಮೂಡುಬಿದಿರೆಯ ಮೀಯಾರಿನ ಶ್ರೀನಿವಾಸ್ ಗೌಡ ಫೆಬ್ರವರಿ 01ರಂದು ನಡೆದ ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಓಡಿ ಸಂಚಲನ ಮೂಡಿಸಿದ್ದರು.

ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ತುಳುನಾಡಿನ ಶ್ರೀನಿವಾಸ!

ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ಕ್ರೀಡಾ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸನ್ಮಾನ ನೆರವೇರಿಸಲಿದ್ದಾರೆ.  ಈ ಕುರಿತಾದ ವಿವರ ಇಲ್ಲಿದೆ ನೋಡಿ...