ರಾಷ್ಟ್ರ ರಾಜಧಾನಿಯಲ್ಲಿ ಬುಲ್ಡೋಜರ್ ಸದ್ದು, ಅಕ್ರಮ ಕಟ್ಟಡ ತೆರವಿಗೆ ಮುಂದಾದ ಪಾಲಿಕೆ
* ಹನುಮ ಜಯಂತಿ ಮೆರವಣಿಗೆಯ ವೇಳೆ ನಡೆದಿದ್ದ ಹಿಂಸೆ
* ದೆಹಲಿ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ
* ಅಕ್ರಮ ಕಟ್ಟಡ ತೆರವಿಗೆ 9 ಬುಲ್ಡೋಜರ್ ಬಳಕೆ
ನವದೆಹಲಿ(ಏ.20): ಇಲ್ಲಿ ಬುಲ್ಡೋಜರ್ ಮಾತು ಅಲ್ಲಿ ಆಪರೇಷನ್ ಶುರುವಾಗಿದೆ. ಹೌದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬುಲ್ಡೋಜರ್ ಆರ್ಭಟಿಸುತ್ತಿದೆ. ನಗರದ ಜಹಾಂಗೀರ್ಪುರಿಯಲ್ಲಿ ಅಕ್ರಮ ಕಟ್ಟ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹನುಮ ಜಯಂತಿ ಮೆರವಣಿಗೆಯ ವೇಳೆ ಹಿಂಸೆ ನಡೆದಿತ್ತು. ಇದೀಗ ದೆಹಲಿ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಅಕ್ರಮ ಕಟ್ಟಡಗಳನ್ನ ತೆರವಿಗೆ 9 ಬುಲ್ಡೋಜರ್ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.