'ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ': ಮಾದಪ್ಪನ ಸನ್ನಿಧಿಗೆ ಅವಿವಾಹಿತರ ಕಾಲ್ನಡಿಗೆ
30 ವರ್ಷ ದಾಟಿದ್ರೂ ಮದುವೆ ಆಗದ ಯುವಕರು ದೇವರ ಮೊರೆ ಹೋಗಿದ್ದು, ವಧು ಸಿಗಲಿ ಎಂದು ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆ ಹೊರಟಿದ್ದಾರೆ.
ಮಂಡ್ಯದ ಕೆ.ಎಂ ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ, ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಆರಂಭವಾಗಿದೆ. ಅವಿವಾಹಿತ ಯುವಕರ ಪಾದಯಾತ್ರೆಗೆ ನಟ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ. ಸ್ವಲ್ಪ ದೂರು ಪಾದಯಾತ್ರಿಗಳೊಂದಿಗೆ ಹೆಜ್ಜೆ ಹಾಕಿದ ಡಾಲಿ,ಮುಂದಿನ ವರ್ಷದೊಳಗೆ ಮದುವೆ ಆಗಲಿ ಅಂತ ಶುಭ ಹಾರೈಸಿದರು.