Asianet Suvarna News Asianet Suvarna News

ಬೆಳ್ಳಂ ಬೆಳ್ಳಗೆ ಕಿಲ್ಲರ್‌ ಬಿಎಂಟಿಸಿಗೆ 2 ಬಲಿ: ವಿಜಯನಗರ, ಹುಳಿಮಾವಿನಲ್ಲಿ ಅಪಘಾತ

ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್‌ಗೆ ಇಬ್ಬರು ಬಲಿಯಾಗಿದ್ದಾರೆ. ವಿಜಯನಗರ ಹಾಗೂ ಹುಳಿಮಾವುನಲ್ಲಿ ಡೆಡ್ಲಿ ಅಪಘಾತ ಸಂಭವಿಸಿದೆ.
 

First Published Oct 29, 2023, 12:36 PM IST | Last Updated Oct 29, 2023, 12:36 PM IST

ಬೆಂಗಳೂರಿನಲ್ಲಿ ಬಿಎಂಟಿಸಿಗೆ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಬಿಎಂಟಿಸಿಗೆ(BMTC) ಮಹಿಳೆ ಬಲಿಯಾಗಿದ್ದಾರೆ. ಇದೀಗ ವಿಜಯನಗರ(Vijayanagar) ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ವ್ಯಕ್ತಿ ಬಿಎಂಟಿಸಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಕುಮಾರ್ (45) ಮೃತ ವ್ಯಕ್ತಿಯಾಗಿದ್ದಾರೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗೋವಿಂದರಾಜನಗರ ಬೈ ಟು ಕಾಫಿ ಮುಂಭಾಗ ಘಟನೆ ನಡೆದಿದೆ. ಸ್ಥಳಕ್ಕೆ ವಿಜಯನಗರ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಹಿಳೆ ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ಘಟನೆ ನಡೆದಿದ್ದು, ವೀಣಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕೇಕ್‌ ಕಟ್‌ ಮಾಡಿ ಬಡ ಮಕ್ಕಳಿಗೆ ಕೊಡಿ, ಅವರ ನಗುವಿನಲ್ಲಿ ಅಪ್ಪು ಕಾಣಿ: ಅಭಿಮಾನಿಗಳಿಗೆ ರಾಘಣ್ಣ ಸಲಹೆ

Video Top Stories