Asianet Suvarna News Asianet Suvarna News

ಇದೆಂಥಾ ಪ್ರಚಾರದ ಹುಚ್ಚು, ಸುಧಾಮೂರ್ತಿ‌ ಕೊಟ್ಟ ಸಾಮಾಗ್ರಿ ಮೇಲೆ ಬಿಜೆಪಿ ನಾಯಕನ ಸ್ಟಿಕ್ಕರ್!

  • ಹಸಿವು, ಬಿಕ್ಕಟ್ಟಿನಲ್ಲೂ ರಾಜಕೀಯ, ಆಹಾರ ಸಾಮಾಗ್ರಿ ಮೇಲೂ ರಾಜಕಾರಣಿಗಳ ಪ್ರಚಾರ
  • ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್, ಅಕ್ಷಯಪಾತ್ರೆ ಸಂಸ್ಥೆ ನೀಡಿದ್ದ ದಿನಸಿ
  • ಅವುಗಳ ಮೇಲೆ ತನ್ನ ಸ್ಟಿಕ್ಕರ್ಸ್ ಅಂಟಿಸಿ ವಿತರಿಸಿದ ರಾಯಚೂರು ಬಿಜೆಪಿ ನಾಯಕ 

ರಾಯಚೂರು (ಏ.17): ಹಸಿವು, ಬಿಕ್ಕಟ್ಟಿನಲ್ಲೂ ರಾಜಕೀಯ ಮಾಡುವವರಿಗೇನೂ ಕೊರತೆಯಿಲ್ಲ. ಆಹಾರ ಸಾಮಾಗ್ರಿ ಮೇಲೂ ರಾಜಕಾರಣಿಗಳು ಪ್ರಚಾರ ಪಡೆಯೋದು ಸಾಮಾನ್ಯ. ಬೇರೊಬ್ಬರು ಕೊಟ್ಟ ದಿನಸಿ ಸಾಮಾಗ್ರಿ ಮೇಲೆ ತಮ್ಮ ಸ್ಟಿಕ್ಕರ್ ಅಂಟಿಸಿ ವಿತರಣೆ ಮಾಡುವವರೂ ಇದ್ದಾರೆ.

ಇದನ್ನೂ ನೋಡಿ | ಬಡವರ ಅನ್ನಕ್ಕೆ ಕನ್ನ! ಬಿಜೆಪಿ ಕಾರ್ಯಕರ್ತರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ...

ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್ ಮತ್ತು ಅಕ್ಷಯಪಾತ್ರೆ ಫೌಂಡೇಶನ್ ಸಂಸ್ಥೆ ನೀಡಿದ್ದ ದಿನಸಿ ಸಾಮಾಗ್ರಿಗಳ ಮೇಲೆ, ಬಿಜೆಪಿ ನಾಯಕರೊಬ್ಬರು ತಮ್ಮ ಸ್ಟಿಕ್ಕರ್ಸ್ ಅಂಟಿಸಿ ವಿತರಿಸಿರುವ ಘಟನೆ ನಡೆದಿದೆ. 

ಫ್ರೀ ಹಾಲು ಬೇಕಾದ್ರೆ ವೋಟರ್ ಐಡಿ ತೋರ್ಸಿ! ಹಸಿವಿನಲ್ಲೂ ಬಿಜೆಪಿ ನಾಯಕನ ಪಾಲಿಟಿಕ್ಸ್‌...
"

Video Top Stories