Asianet Suvarna News Asianet Suvarna News

ಮದುವೆಯಾಗಿದ್ರೂ ಬಿಡದ ಹುಡುಗಿಯರ ಚಟ: ಕಾಮುಕನಿಗೆ ಬಿತ್ತು ಧರ್ಮದೇಟು!

ಮದುವೆಯಾಗಿದ್ದರೂ ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ದ ಕಾಂಟ್ರ್ಯಾಕ್ಟರ್‌| ಯುವತಿಯ ಮನೆಯವರಿಂದ ಕಾಂಟ್ರ್ಯಾಕ್ಟರ್‌ಗೆ ಬಿದ್ವು ಧರ್ಮದೇಟು| ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ನಡೆದ ಘಟನೆ| 

ವಿಜಯಪುರ(ಜ.15): ಮದುವೆಯಾಗಿದ್ದರೂ ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ದ ಕಾಂಟ್ರ್ಯಾಕ್ಟರ್‌ವೊಬ್ಬನಿಗೆ ಯುವತಿಯ ಸಂಬಂಧಿಕರು ಧರ್ಮದೇಟು ನೀಡಿದ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಮೋತಿಸಾಬ್ ತಳೇವಾಡ ಎಂಬಾತನೇ ಯುವತಿಯ ಹಿಂದೆ ಹಿಗ್ಗಾ ಮುಗ್ಗಾ ಏಟು ತಿಂದ ವ್ಯಕ್ತಿಯಾಗಿದ್ದಾನೆ. 

ಮೋತಿಸಾಬ್ ತಳೇವಾಡ ಹಣ ಕೊಡ್ತಿನಿ, ಬರ್ತಿಯಾ ಎಂದು ಕಾಲೇಜು ಯುವತಿಗೆ ಕೇಳದ್ದ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಪಟ್ಟಣದ ಹೊರವಲಯದಲ್ಲಿ ಕರೆದೊಯ್ದು ಚಪ್ಪಲಿ ಏಟು ನೀಡಿದ್ದಾರೆ. ಯುವತಿಯ ಫೋಟೊ ತೆಗೆದು ಕಿರಿಕಿರಿ ಮಾಡುತ್ತಿದ್ದನಂತೆ. ಕೇಳಿದಷ್ಟು ಹಣ ಕೊಡುತ್ತೇನೆ ಹಾಸಿಗೆಗೆ ಬಾ ಎಂದಿದ್ದನಂತೆ ಈ ಭೂಪ. 
 

Video Top Stories