Asianet Suvarna News Asianet Suvarna News

Big 3 Impact: ವರದಿ ಪ್ರಸಾರವಾದ 6 ಗಂಟೆಯಲ್ಲೇ ಶಾಲೆಗೆ ಬಂತು ಪೈಪ್ ಲೈನ್

ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರ|ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಇದ್ದ ಸಮಸ್ಯೆ| ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು|

ರಾಯಚೂರು[ಜ.31]:  ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಕ್ಕೆ ಹೋಗಲು ಪರದಾಡುವಂತ ಸುದ್ದಿಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರವಾಗಿದೆ. ನಾಲ್ಕು ವರ್ಷದಿಂದ  ಇದ್ದ ಸಮಸ್ಯೆಯನ್ನ ಅಧಿಕಾರಿಗಳು ಒಂದೇ ದಿನದಲ್ಲಿ ಪರಿಹಾರ ಮಾಡಿದ್ದಾರೆ. 

ಇಲ್ಲಿನ ಶಾಲಾ ಮಕ್ಕಳ ನರಕಕ್ಕೆ ಮುಕ್ತಿ ಸಿಗೋದು ಯಾವಾಗ?

ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎದ್ನೋ ಬಿದ್ನೋ ಅಂತ ಈ ಶಾಲೆಗೆ ಆಗಮಿಸಿ ಶೌಚಾಲಯದಲ್ಲಿ ಇದ್ದ ನೀರಿನ ಸಮಸ್ಯೆಯನ್ನ ಪರಿಹರಿಸಿದ್ದಾರೆ. ವರದಿ ಪ್ರಸಾರವಾದ ಕೇವಲ ಆರೇ ಗಂಟೆಯಲ್ಲಿ ಶೌಚಾಲಯಕ್ಕೆ ನೀರು ಬಂದಿದೆ. ಇದರಿಂದ ಇಲ್ಲಿನ ಮಕ್ಕಳು ನಿಟ್ಟುಸಿರು ಬಿಡುವಂತಾಗಿದೆ. ಶೌಚಾಲಯಕ್ಕೆ ನೀರು ಬರುವಂತೆ ಮಾಡಿದ್ದ ಸುವರ್ಣ ನ್ಯೂಸ್ ಗೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.