Asianet Suvarna News Asianet Suvarna News

Mandya: ಸೈಟ್ ವಿಚಾರ, ಕುಟುಂಬಗಳ ಮಧ್ಯೆ ಬಡಿದಾಟ, ಓರ್ವ ವೃದ್ಧ, ಮಹಿಳೆಗೆ ಗಾಯ

ನಿವೇಶನ ವಿಚಾರಕ್ಕೆ ಎರಡು ಕುಟುಂಬದ ಸದಸ್ಯರು ನಟ್ಟ ನಡುವೆ ರಸ್ತೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ (ನ. 23): ನಿವೇಶನ ವಿಚಾರಕ್ಕೆ (Land Issue) ಎರಡು ಕುಟುಂಬದ ಸದಸ್ಯರು ನಟ್ಟ ನಡುವೆ ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಹಮಕೆರೆ ಗ್ರಾಮದ ಪಾಪಣ್ಣ ಹಾಗೂ ಮಹೇಶ್ ಕುಟುಂಬದ ನಡುವೆ ಗಲಾಟೆ ನಡೆದಿದ್ದು, ಪಾಪಣ್ಣ ಕುಟುಂಬದ ಓರ್ವ ವೃದ್ಧ ಹಾಗೂ ಮಹಿಳೆಗೆ ಗಾಯವಾಗಿದೆ.

Stop Illegal Mining : ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ.ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್

ಮಹೇಶ್ ಪುತ್ರರಾದ ಅಭಿ, ಸಂತು ಹಾಗೂ ಸಹಚರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸೈಟ್ ವಿಚಾರವಾಗಿ ಎರಡು ಕುಟುಂಬದ ನಡುವೆ ಘರ್ಷಣೆ ಇತ್ತು ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ.