Asianet Suvarna News Asianet Suvarna News

ಬಾವಿ ತೋಡಿ ಬರಗಾಲ ಓಡಿಸಿದ್ದ ಸಿದ್ದೇಶ್ವರ ಶ್ರೀಗಳು: ಇದು ಸರಳತೆಯ ಸಂತನ ಪವಾಡ

ನಡೆದಾಡುವ ಸಂತ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಗ್ಗೆ ನೀವೆಲ್ಲೂ ಕೇಳಿರದ ಕುತೂಹಲ ಸಂಗತಿ ಇಲ್ಲಿದೆ.
 

First Published Jan 14, 2023, 4:22 PM IST | Last Updated Jan 14, 2023, 5:17 PM IST

ಸರಳತೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಆದರೆ ಅವರು ಲಕ್ಷಾಂತರ ಭಕ್ತರ ಹೃದಯದಲ್ಲಿ ಸದಾ ಶಾಶ್ವತವಾಗಿ ನೆಲೆಸಿದ್ದಾರೆ. ಶ್ರೀಗಳ ಪ್ರವಚನ ಕೇಳುವಾಗ ಪಕ್ಷಿಗಳಿಂದಲೂ ಸಂವಹನ ನಡೆಯುತ್ತಿತ್ತು. ಸಿದ್ದೇಶ್ವರ ಶ್ರೀಗಳು, ಬಾವಿ ತೋಡಿ ಬರಗಾಲ ಓಡಿಸಿದ್ದರು. ಯೋಗಾಶ್ರಮದಲ್ಲಿ ಶ್ರೀಗಳು ನಿರ್ಮಿಸಿದ ಎರಡು ಬಾವಿಗಳಿವೆ. ಸರಳತೆಯ ಇನ್ನೊಂದು ಹೆಸರೇ ಸಿದ್ದೇಶ್ವರ ಶ್ರೀಗಳು, ನಿಸರ್ಗವನ್ನೇ ಸಂಪತ್ತು ಎನ್ನುತ್ತಿದ್ದರು. ಶ್ರೀಗಳು ಭೂಮಿಯೇ ನಿಜವಾದ ಸಂಪತ್ತು ಎಂದು ಹೇಳುತ್ತಿದ್ದರು.