ಅಧಿಕಾರಕ್ಕಾಗಿ 'ಆಪರೇಷನ್ ಕಮಲ': ಸಿಎಂ ರಾಜಕೀಯ ಕಾರ್ಯದರ್ಶಿ ಆಪ್ತರ ವಿರುದ್ಧ FIR
* ಕಲೈ ಅರಸಿ ದೂರು ಆಧರಿಸಿ ಎಫ್ಐಆರ್
* ಬೆದರಿಸಿ ಹಣ ನೀಡಿ, ಜಾತಿ ನಿಂದನೆ ಮಾಡಿದ್ದಾರೆಂದು ಕಲೈ ಆಧರಿಸಿ ದೂರು
* ನಗರಸಭೆ ಅಧಿಕಾರಕ್ಕಾಗಿ ಆಪರೇಷನ್ ಕಮಲ
ಹಾಸನ(ಜೂ.26): ಜಿಲ್ಲೆಯ ಅರಸೀಕೆರೆ ನಗರಸಭೆ ಅಧಿಕಾರಕ್ಕಾಗಿ ಆಪರೇಷನ್ ಕಮಲ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಆಪ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಗರಸಭೆ ಜೆಡಿಎಸ್ ಸದಸ್ಯೆ ಕಲೈ ಅರಸಿ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಎನ್.ಆರ್.ಸಂತೋಷ್ ಆಪ್ತ, ಜೆಡಿಎಸ್ ಸದಸ್ಯ ಹರ್ಷವರ್ಧನ್, ಜೆಡಿಎಸ್ ಸದಸ್ಯೆ ಆಯಿಷಾ ಪತಿ ಸಿಕಂದರ್ ವಿರುದ್ಧ ಕೇಸ್ ದಾಖಲಾಗಿದೆ. ಬೆದರಿಸಿ ಹಣ ನೀಡಿ, ಜಾತಿ ನಿಂದನೆ ಮಾಡಿದ್ದಾರೆಂದು ಕಲೈ ಆಧರಿಸಿ ದೂರು ದಾಖಲಾಗಿದೆ.
ಜೆಡಿಎಸ್ ಸದಸ್ಯರಿಗೆ ಬಿಜೆಪಿ ಹಣದ ಆಮೀಷ: ಹಣದ ಬಂಡಲ್ ಜತೆ ರೇವಣ್ಣ ಸುದ್ದಿಗೋಷ್ಠಿ