Asianet Suvarna News Asianet Suvarna News

ಕಲಬುರಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ: ಕೆಂಡ ತುಳಿದು ಭಕ್ತಿ ಮೆರೆದ ಸಾವಿರಾರು ಭಕ್ತರು

ಕಲಬುರಗಿಯ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಿಗಿ ನಿಗಿ ಕೆಂಡದ ಮೇಲೆ ಭಕ್ತರು ನಡೆದಿದ್ದಾರೆ.

First Published Nov 7, 2022, 5:51 PM IST | Last Updated Nov 7, 2022, 5:51 PM IST

ನಗರದ ರೋಜಾ ಬಡಾವಣೆಯಲ್ಲಿ ಜಾತ್ರೆಯ ಅಂಗವಾಗಿ ಕೆಂಡದ ಮೇಲೆ ನಿರ್ಭಯದಿಂದ ಸಾವಿರಾರು ಜನ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಕೆಂಡದ ಮೇಲೆ ಕಾಲ್ನಡಿಯ ಮೂಲಕ ಹೋಗುವಾಗ ಇನ್ನೇನು ಬೆಂಕಿಗೆ ಆಹುತಿಯಾಗುತ್ತಿದ್ದರು. ಆದರೆ ಸಮೀಪದಲ್ಲಿದ್ದ ಇತರೇ ಭಕ್ತರು ಅವರನ್ನು ಹಿಡಿದೆಳೆದು ರಕ್ಷಿಸಿ, ಭಾರೀ ಅನಾಹುತ ತಪ್ಪಿಸಿದರು. ಅದಾಗ್ಯೂ ಸಾವಿರಾರು ಭಕ್ತರು ಕೆಂಡದ ಮೇಲೆ ನಡೆದು ಭಕ್ತಿ ಮೆರೆದರು.